ನವದೆಹಲಿ: ಟ್ಯೂಷನ್ ತರಗತಿಯಲ್ಲಿ ವಿದ್ಯಾರ್ಥಿನಿಯೊಬ್ಬಳೊಂದಿಗೆ ಸ್ನೇಹ ಹೊಂದಿದ್ದನ್ನು ವಿರೋಧಿಸಿ ವಿದ್ಯಾರ್ಥಿಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಬೆರಳು ಕಟ್ ಮಾಡಿದ ಘಟನೆ ದಕ್ಷಿಣ ದ್ವಾರಕಾದಲ್ಲಿ ನಡೆದಿದೆ.
ಆರೋಪಿ ಅದೇ ಶಾಲೆಯಲ್ಲಿ ಓದಿ, ಈಗಾಗಲೇ ಪದವಿ ಮುಗಿಸಿದ್ದು, ಶಾಲೆಯ ಹೊರಗೆ ಭೇಟಿಯಾಗಿ ಉದ್ಯಾನವನಕ್ಕೆ ಕರೆದೊಯ್ದ ಕೃತ್ಯ ಎಸಗಿದ್ದಾದ್ದಾರೆ.
ಅಕ್ಟೋಬರ್ 21 ರಂದು ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ವಿದ್ಯಾರ್ಥಿಯು ತನ್ನ ಪೋಷಕರಿಗೆ ವಿಷಯ ತಿಳಿಸದೇ ಮೋಟಾರ್ಸೈಕಲ್ನ ಚೈನ್ಗೆ ಸಿಲುಕಿ ಬೆರಳು ಕಟ್ ಆಗಿದೆ ಎಂದು ಹೇಳಿಕೊಂಡಿದ್ದಾನೆ. ಅದಾಗ್ಯೂ, ಶುಕ್ರವಾರದಂದು ವಿದ್ಯಾರ್ಥಿಯು ತನ್ನ ಪೋಷಕರಿಗೆ ಘಟನೆ ಬಗ್ಗೆ ಬಾಯಿಬಿಟ್ಟಿದ್ದು, ಕೂಡಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.