ಬೆಂಗಳೂರು: ತನ್ನ ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ಚಾಕುವಿನಿಂದ ಇರಿದು ತಂದೆ ಹತ್ಯೆಗೈದ ಘಟನೆ ಸುಬ್ಬಣ್ಣ ಗಾರ್ಡನ್ ಬಳಿ ನಡೆದಿದೆ.
ಇನ್ನು, ಡೇವಿಡ್ (22) ಕೊಲೆಯಾದ ಯುವಕ. ಯುವತಿ ತಂದೆ ಮಂಜುನಾಥ್ ಎಂಬಾತ ಯುವಕನನ್ನು ಕೊಂದ ವ್ಯಕ್ತಿ.
ಯುವತಿ ವಿಲ್ಸನ್ ಗಾರ್ಡನ್ ವಿನಾಯಕ ನಗರದಲ್ಲಿ ವಾಸವಾಗಿದ್ದಳು. ಡೇವಿಡ್ ಆಟೋ ಡ್ರೈವರ್ ಆಗಿದ್ದ. ಈತ ಮಂಜುನಾಥ್ ಮಗಳನ್ನು ಪ್ರೀತಿಸುತ್ತಿದ್ದು, ಮದುವೆ ಆಗು ಎಂದು ಪೀಡಿಸುತ್ತಿದ್ದ. ಮದುವೆ ಆಗದಿದ್ರೆ ಯುವತಿ ಜತೆಗಿರೋ ಫೋಟೋಗಳನ್ನು ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ಯುವಕನ್ನು ಮಾತನಾಡಲು ಕರೆದ ಯುವತಿ ತಂದೆ ಬಳಿಕ ಕೊಲೆ ಮಾಡಿದ್ದಾರೆ. ಘಟನೆ ಸಂಬಂಧ ಯುವತಿ ತಂದೆಯನ್ನು ಸದ್ಯ ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.