ಆರೋಗ್ಯಕರ ರವೆ ರೊಟ್ಟಿ ಮಾಡುವ ಸುಲಭ ವಿಧಾನ

ಕರ್ನಾಟಕದ ವಿಶಿಷ್ಟ ಹಾಗೂ ಆರೋಗ್ಯಕರ ತಿಂಡಿಗಳಲ್ಲಿ ರೊಟ್ಟಿಗೆ ವಿಶೇಷ ಸ್ಥಾನವಿದೆ. ಆರೋಗ್ಯದ ದೃಷ್ಟಿಯಿಂದ ರೊಟಿಗಳನ್ನು ಹೆಚ್ಚಿನ ಜನ ಇಷ್ಟ ಪಡುತ್ತಾರೆ. ಈ ರೊಟಿಗಳಲ್ಲಿ ಹಲವಾರು ಬಗೆಗಳಿವೆ ಅವುಗಳಲ್ಲಿ ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಗೋಧಿ ರೊಟ್ಟಿ, ರವೆ ರೊಟ್ಟಿ ಹೀಗೆ ಹತ್ತು ಹಲವು ವಿಧಗಳು ಕಾಣಸಿಗುತ್ತವೆ. ಸುಲಭವಾಗಿ ಮಾಡುವ ರವೆ ರೊಟ್ಟಿಯನ್ನ ಇಲ್ಲಿದೆ..

ಬೇಕಾಗುವ ಪದಾರ್ಥಗಳು :

• ರವೆ – 3 ಕಪ್ಪ್

• ಮೊಸರು – 1 ಕಪ್ಪ್

• ಬಾಳೆಹಣ್ಣು – 2

• ಹಸಿಮೆಣಸಿನಕಾಯಿ – 4

• ಈರುಳ್ಳಿ – 2

• ಸಕ್ಕರೆ – 2 ಚಮಚ

• ಸ್ವಲ್ಪ ಹಸಿ ಶುಂಠಿ

• ಸ್ವಲ್ಪ ತುಪ್ಪ

• ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ :

ಮೊದಲಿಗೆ ರವೆ, ಮೊಸರು ಹಾಗೂ ಬೇಕಾದಷ್ಟು ನೀರನ್ನು ಹಾಕಿ ಅರ್ಧ ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಉಪ್ಪು ಸಕ್ಕರೆ ಹಾಕಿ, ನೀರುಳ್ಳಿ ಹಸಿ ಮೆಣಸಿನಕಾಯಿ, ಹಸಿಶುಂಠಿ, ಬಾಳೆಹಣ್ಣು ಹೆಚ್ಚಿ ರವೆ ಮಿಶ್ರಣಕ್ಕೆ ಸೇರಿಸಿಕೊಳ್ಳಬೇಕು. ಒಲೆಯ ಮೇಲೆ ಕಾವಲಿ ಇಟ್ಟು ಕಾದ ಕಾವಲಿಗೆ ತುಪ್ಪ ಸವರಿ, ರವೆಯ ಮಿಶ್ರಣವನ್ನು ಕಾವಲಿಯ ಮೇಲೆ ಹರಡಿ ಸ್ವಲ್ಪ ಹೊತ್ತು ಮುಚ್ಚಿಡಬೇಕು. ಒಂದು ಬದಿ ಬೆಂದ ನಂತರ ಮತ್ತೆ ಸ್ವಲ್ಪ ತುಪ್ಪ ಹಾಕಿ ಇನ್ನೊಂದು ಬದಿ ಕೆಂಪಗಾಗುವವರೆಗೂ ಬೇಯಿಸಬೇಕು.

Ashika S

Recent Posts

ಕೇಜ್ರಿವಾಲ್‌ಗೆ ಷರತ್ತು ವಿಧಿಸಿ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…

16 mins ago

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

43 mins ago

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಶವ ಪತ್ತೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ ಶವವಾಗಿ ಪತ್ತೆಯಾಗಿದ್ದಾನೆ.

51 mins ago

ದಾಭೋಲ್ಕರ ಹತ್ಯೆ ಕೇಸ್ ನಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನ ಸಂಸ್ಥೆ ಸಂತಸ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಂದು ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ…

52 mins ago

ಕೊಲ್ಲೂರು ಪುಣ್ಯ ನದಿಗಳ ಮಾಲಿನ್ಯ: ಅರ್ಜಿ ವಿಚಾರಣೆಗೆ ಹಸಿರು ಪೀಠ ಅಂಗೀಕಾರ

ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರಿನ ಪುಣ್ಯ ನದಿಗಳನ್ನು ಮಾಲಿನ್ಯಗೊಳಿಸುತ್ತಿರುವ, ಪರಿಸರ ನಾಶಗೊಳಿಸುತ್ತಿರುವ ಹಾಗೂ ಸರ್ಕಾರಿ ಭೂಮಿಗಳ ಅತಿಕ್ರಮಣದ…

1 hour ago

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; ಪ್ರಮುಖ ಆರೋಪಿ ಬಂಧನಕ್ಕೆ ಪತ್ನಿ ನೂತನ ಸಂತಸ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮುಸ್ತಫಾ ಪೈಚಾರನ್ನ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು, ಮುಸ್ತಫಾ…

1 hour ago