ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ನಾಯಕ ನಟನಾಗಿ ನಟಿಸುತ್ತಿರುವ ‘ಭೋಲಾ ಶಂಕರ್’ ಚಿತ್ರ ಇಂದು (ಗುರುವಾರ) ಸೆಟ್ಟೇರಿದೆ. ಚಿತ್ರಕ್ಕೆ ಮೆಹರ್ ರಮೇಶ್ ನಿರ್ದೇಶನ ಮಾಡುತ್ತಿದ್ದು, ಆಯಕ್ಷನ್ ಥ್ರಿಲ್ಲರ್ ಕಥಾ ಹಂದರವನ್ನು ಸಿನಿಮಾ ಹೊಂದಿದೆ.
ಇಂದು ಮುಗೂರ್ತ ಕಾರ್ಯಕ್ರಮದಲ್ಲಿ ಟಾಲಿವುಡ್ ನ ಪ್ರಮುಖ ನಿರ್ದೇಶಕರಾದ ಕೆ.ರಾಘವೇಂದ್ರ ರಾವ್, ವಿ.ವಿ.ವಿನಾಯಕ್, ಹರೀಶ್ ಶಂಕರ್, ಬಾಬಿ, ಗೋಪಿಚಂದ್ ಮಲಿನೇನಿ, ವಂಶಿ ಪೈಡಿಪಲ್ಲಿ, ಕೊರಟಾಲ ಶಿವ ಸೇರಿದಂತೆ ಹಲವತು ಭಾಗವಹಿಸಿದ್ದರು.
ಪೂಜೆಯ ನಂತರ ಚಿತ್ರತಂಡಕ್ಕೆ ಸ್ಕ್ರಿಪ್ಟ್ ನೀಡಲಾಯಿತು. ಮುಹೂರ್ತದ ಚಿತ್ರೀಕರಣದ ಅಂಗವಾಗಿ ನಿರ್ದೇಶಕ ಕೆ.ರಾಘವೇಂದ್ರರಾವ್ ಚಿರುಗೆ ಕ್ಲಾಪ್ ಮಾಡುವ ಮಲಕ ಶುಭ ಕೋರಿದರು.
ತಮಿಳಿನ ಸೂಪರ್ ಹಿಟ್ ಚಿತ್ರ ‘ವೇದಾಲಂ’ ನ ರೀಮೇಕ್ ಆಗಿ ಈ ಚಿತ್ರ ಸೆಟ್ಟೇರಿದೆ. ಇನ್ನು ಸಿನಿಮಾದಲ್ಲಿ ಚಿರಂಜೀವಿ ಅವರ ಸಹೋದರಿ ಪಾತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ. ತಮನ್ನಾ ಕೂಡ ಮೆಗಾಸ್ಟಾರ್ ಗೆ ಜೋಡಿಯಾಗಲಿದ್ದಾರೆ. ಏಕೆ ಎಂಟರ್ ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ರಾಮಬ್ರಹ್ಮಣ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.