News Karnataka Kannada
Wednesday, May 08 2024
ತೆಲುಗು

ಆಘಾತಕಾರಿ ವಿಷಯ ಬಾಯ್ಬಿಟ್ಟ ಪವನ್ ಕಲ್ಯಾಣ್!-ಕೋಮಾದಲ್ಲಿದ್ದಾರೆ ಸಾಯಿ ಧರಮ್ ತೇಜ್

Sai Dharam Tej
Photo Credit :

ಟಾಲಿವುಡ್:  ಸಾಯಿ ಧರಮ್ ತೇಜ್ ಅವರ ಚಿಕಿತ್ಸೆ ಮುಂದುವರೆದಿದೆ. ಹೀಗಿರುವಾಗಲೇ, ನಟ ಸಾಯಿ ಧರಮ್ ತೇಜ್ ಅವರ ಆರೋಗ್ಯದ ಬಗ್ಗೆ ಪವನ್ ಕಲ್ಯಾಣ್ ಆಘಾತಕಾರಿ ಮಾಹಿತಿ ಬಾಯ್ಬಿಟ್ಟಿದ್ದಾರೆ.ಮೆಗಾ ಸ್ಟಾರ್ ಚಿರಂಜೀವಿ ಅವರ ಸಹೋದರಿಯ ಪುತ್ರ, ಟಾಲಿವುಡ್‌ನ ಉದಯೋನ್ಮುಖ ನಟ ಸಾಯಿ ಧರಮ್ ತೇಜ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಕಳೆದ ಸೆಪ್ಟೆಂಬರ್ 10 ರಂದು ಸಂಭವಿಸಿದ ಬೈಕ್ ಆಕ್ಸಿಡೆಂಟ್‌ನಲ್ಲಿ ನಟ ಸಾಯಿ ಧರಮ್ ತೇಜ್ ಅವರ ಕಾಲರ್ ಬೋನ್ ಫ್ರ್ಯಾಕ್ಚರ್ ಆಗಿತ್ತು.‘‘ಸಾಯಿ ಧರಮ್ ತೇಜ್ ಕೋಮಾದಲ್ಲಿದ್ದಾರೆ’’ ಎಂದ ನಟ ಪವನ್ ಕಲ್ಯಾಣ್
ನಟ ಸಾಯಿ ಧರಮ್ ತೇಜ್ ಅಭಿನಯದ ‘ರಿಪಬ್ಲಿಕ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ‘ರಿಪಬ್ಲಿಕ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ಗೆ ಪವನ್ ಕಲ್ಯಾಣ್ ಹಾಜರ್ ಆಗಿದ್ದರು. ಇದೇ ಸಮಾರಂಭದಲ್ಲಿ ಸಾಯಿ ಧರಮ್ ತೇಜ್ ಅವರ ಆರೋಗ್ಯದ ಬಗ್ಗೆ ಪವನ್ ಕಲ್ಯಾಣ್ ಮಾತನಾಡಿದ್ದಾರೆ.
’ನನ್ನ ಸಂಬಂಧಿಕರ ಸಿನಿಮಾ ಸಮಾರಂಭಗಳಲ್ಲಿ ನಾನು ಭಾಗವಹಿಸುವುದಿಲ್ಲ. ಆದರೆ, ಈಗ ‘ರಿಪಬ್ಲಿಕ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ನಾನು ಭಾಗವಹಿಸುತ್ತಿರುವುದಕ್ಕೆ ಕಾರಣ ನನ್ನ ಸೋದರಳಿಯ ಸಾಯಿ ಧರಮ್ ತೇಜ್. ರಸ್ತೆ ಅಪಘಾತದಿಂದಾಗಿ ಗಾಯಗೊಂಡಿರುವ ಸಾಯಿ ಧರಮ್ ತೇಜ್ ಸದ್ಯ ಆಸ್ಪತ್ರೆಯಲ್ಲಿದ್ದಾರೆ’’‘’ಸಾಯಿ ಧರಮ್ ತೇಜ್ ವೇಗವಾಗಿ ಬೈಕ್ ಚಲಾಯಿಸುತ್ತಿದ್ದರು ಎಂದು ವರದಿಯಾಗಿದೆ. ಆದರೆ, ಸಾಯಿ ಧರಮ್ ತೇಜ್ 45 kmph ವೇಗದಲ್ಲಿ ಮಾತ್ರ ಬೈಕ್ ಚಲಾಯಿಸುತ್ತಿದ್ದರು. ಅಪಘಾತ ಸಂಭವಿಸಿದ್ದು ದುರಾದೃಷ್ಟಕರ. ಸಾಯಿ ಧರಮ್ ತೇಜ್ ಇನ್ನೂ ಕೋಮಾದಲ್ಲಿದ್ದಾರೆ. ಅವರಿನ್ನೂ ಕಣ್ಣು ಬಿಟ್ಟಿಲ್ಲ’’ ಎಂದು ‘ರಿಪಬ್ಲಿಕ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಪವನ್ ಕಲ್ಯಾಣ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು