News Karnataka Kannada
Friday, May 17 2024
ಮನರಂಜನೆ

ಸನಾತನ ಧರ್ಮವನ್ನು ‘ಕಾಗೆಗಳಿಗೆ’ ಹೋಲಿಸಿದ ನಟ ಪ್ರಕಾಶ್​ ರಾಜ್​

Prakash Raj compares Sanatan Dharma to 'crows'
Photo Credit : News Kannada

ಕಲಬುರಗಿ: ನಟ ಪ್ರಕಾಶ್​ ರಾಜ್​ ಸನಾತನ ಧರ್ಮದ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುವ ಮೂಲಕ ‘ಧರ್ಮ ಅನ್ನೋ ಕಥೆ ಹೇಗಂದ್ರೆ ಕಾಗೆಗಳು ಎಲ್ಲವು ಸೇರಿಕೊಂಡಿದ್ದವಂತೆ’ ಎಂದು ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ನಟ ಪ್ರಕಾಶ್​ ರಾಜ್​, ಸನಾತನ ಅಂದ್ರೆ ಬದಲಾದದ್ದು ಕಾಲಾನು ಕಾಲಕ್ಕೆ. ಬದಲಾಗಲ್ಲ ನಾನು ಎನ್ನುವುದು ಈ ಪ್ರಕೃತಿಯ ಕ್ರಿಯೆಗೆ ವಿರುದ್ಧವೇ. ನಾನು ಬದಲಾಗೋದಿಲ್ಲ , ನಾನೇ ಶ್ರೇಷ್ಠ ನಾನೇ ಸತ್ಯ ಅಂತಾರೋ ಸುಳ್ಳು. ಪ್ರಪಂಚದ ಯಾವ ಧರ್ಮವೂ ಇನ್ನೂಬ್ಬನ ಕೊಲ್ಲೊಕೆ ಹೇಳೊದಿಲ್ಲ.

ಅದನ್ನ ಉಪಯೋಗಿಸಿಕೊಂಡು ಇನ್ನೊಬ್ಬ ಕೊಲ್ತಾನೆ ಎಂದು ಹೇಳಿದ್ದಾರೆ. ಯಾವ ಧರ್ಮ, ಧರ್ಮ ಮಾನವೀಯ ಧರ್ಮ ಅಸ್ಪ್ರಶ್ಯತೆ ಹೇಳುತ್ತಾ?. ಧರ್ಮ ಅನ್ನೋ ಕಥೆ ಹೇಗಂದ್ರೆ ಕಾಗೆಗಳು ಎಲ್ಲವು ಸೇರಿಕೊಂಡಿದ್ದವಂತೆ. ಕಾಗೆಗಳು ಸೇರಿಕೊಂಡು ನಾವೇ ಜಾಸ್ತಿ ಇದ್ದಿವಿ ಕೋಗಿಲೆ, ನವೀಲು ನಮ್ಮ ಮಾತು ಕೇಳಬೇಕು ಅಂದ್ರೆ ಹೆಂಗೆ ?. ಕ್ರೌರ್ಯಕ್ಕೆ ಕರುಣೆ ಇಲ್ಲ , ಹಾಗಾಗಿ ಅದಕ್ಕೆ ಧರ್ಮ ಇಲ್ಲ. ಕರುಣೆ ಇಲ್ಲದ್ದು ಹೇಗೆ ಧರ್ಮ ಆಗುತ್ತೆ. ನಿನ್ನೆಯವರೆಗೂ ಹಿಂದುತ್ವ ಹಿಂದೂ ಧರ್ಮ ಅಂತಿದ್ದವರು ಸನಾತನ ಅಂತಿದ್ದಾರೆ ಎಂದಿದ್ದಾರೆ.

ಸದ್ಯ ಈ ಹೇಳಿಕೆ ಮತ್ತಷ್ಟು ವಿವಾದ ಹುಟ್ಟಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು