ಬೆಂಗಳೂರು: ಈ ಬಾರಿಯ ಕನ್ನಡ ಬಿಗ್ಬಾಸ್ ಸೀಸನ್ 10 ನ್ನು ಗೆಲ್ಲುವ ಸ್ಪರ್ಧಿ ಯಾರೇಂಬುವುದನ್ನು ಮಾಜಿ ಬಿಗ್ಬಾಸ್ ಸ್ಪರ್ಧಿಯಾಗಿರುವ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಅವರು ಭವಿಷ್ಯ ನುಡಿದ್ದಾರೆ.
ಕನ್ನಡ ಸೀಸನ್ 10 ಶುರುವಾಗಿ ತಿಂಗಳು ಕಳೆಯುತ್ತಾ ಬಂದಿದೆ. ಸ್ಪರ್ಧಿಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಮನೆಯಲ್ಲಿ ಎರಡು ಗುಂಪುಗಳಾಗಿದ್ದು ಪರಸ್ಪರರ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ ಸ್ಪರ್ಧಿಗಳು. ಪ್ರತಿ ಟಾಸ್ಕ್ನಲ್ಲಿಯೂ ಗೆಲ್ಲಲೇ ಬೇಕೆಂಬ ಛಲವನ್ನು ಇತ್ತಂಡಗಳ ಸದಸ್ಯರೂ ತೋರಿಸುತ್ತಿದ್ದಾರೆ.
ಆರ್ಯವರ್ಧನ್ ಗುರೂಜಿ ಭವಿಷ್ಯದಂತೆ ಈ ಬಾರಿ ವರ್ತೂರು ಸಂತೋಷ್ ಅವರು ಬಿಗ್ಬಾಸ್ ಗೆಲ್ಲುತ್ತಾರಂತೆ. ”ವರ್ತೂರು ಸಂತೋಷ್ ಅವರದ್ದು ಮೀನ ರಾಶಿ ಅವರಿಗೆ ಅನುಕೂಲಕರ ವಾತಾವರಣ ಇದೆ. ಅವರು ಒಳ್ಳೆಯ ವ್ಯಕ್ತಿ, ರೈತನ ಮಗ. ಬಿಗ್ಬಾಸ್ ಮನೆಯಲ್ಲಿ ಬಹುತೇಕರು ಸಿನಿಮಾ ಹಾಗೂ ಟಿವಿ ಸೀರಿಯಲ್ನವರೇ ಇದ್ದಾರೆ. ಅವರು ಪರಸ್ಪರರ ಬಗ್ಗೆ ತಿಳಿದಿರುವವರು, ಜನರಿಗೂ ಅವರ ಬಗ್ಗೆ ತಿಳಿದಿದೆ. ಆದರೆ ವರ್ತೂರು ಸಂತೋಷ್ಗೆ ಅದೆಲ್ಲ ಗೊತ್ತಿಲ್ಲ. ಮನೆಯ ಒಳಗೆ ಅವರನ್ನು ಕುಗ್ಗಿಸಲಾಗಿದೆ, ಹೊರಗೆ ಕಾನೂನು ರೀತಿಯಾಗಿಯೂ ಅವರನ್ನು ಕುಗ್ಗಿಸಲಾಗಿದೆ. ಜನ ಅವರನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದ್ದಾರೆ.