ಬೆಂಗಳೂರು: ಬುಧವಾರ ತಡರಾತ್ರಿ ದಿವ್ಯಾ ಸುರೇಶ್ ಬಿಗ್ಬಾಸ್ ಮನೆಯಿಂದ ಔಟ್ ಆಗುವ ಮೂಲಕ ಮಂಜು ಪಾವಗಡ, ಕೆ.ಪಿ ಅರವಿಂದ್, ವೈಷ್ಣವಿ, ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಸಂಬರಗಿ ಅವರು ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ.
ಇದೇ ಶನಿವಾರ ಹಾಗೂ ಭಾನುವಾರ ಫಿನಾಲೆ ನಡೆಯಲಿದೆ. ಕಿಚ್ಚ ಸುದೀಪ್ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಕೊನೆಯ ಹಂತದ ಎಲಿಮಿನೇಶನ್ ಪ್ರಕ್ರಿಯೆ ಬುಧವಾರ ತಡರಾತ್ರಿ ನಡೆದಿದ್ದು, ಕೊನೆಯ ಹಂತದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಸುರೇಶ್ ಅವರು ಉಳಿದಿದ್ದರು.
ಸರ್ಪ್ರೈಸ್ ಎಲಿಮಿನೇಶನ್ನಲ್ಲಿ ದಿವ್ಯಾ ಸುರೇಶ್ ಅವರು ಮನೆಯಿಂದ ಹೊರ ನಡೆದಿದ್ದಾರೆ. ಕೋವಿಡ್ ಲಾಕ್ಡೌನ್ ಹಿನ್ನೆಲೆ ಈ ಬಾರಿ ಬಿಗ್ಬಾಸ್ ಕನ್ನಡ ಎರಡು ಹಂತದಲ್ಲಿ ನಡೆದಿದೆ.