ಚಿಕ್ಕಮಗಳೂರು: ಚಲನಚಿತ್ರ ಸಾಹಿತಿ ಚಿಂತನಹಳ್ಳಿ ಉದಯಶಂಕರ್ಅವರ ಸಾಹಿತ್ಯದಲ್ಲಿ ಸಮಾಜ ಸುಧಾರಣೆಗೆ ಪೂರಕವಾದ ಸಂದೇಶವಿದೆ ಎಂದು ಜಿಲ್ಲಾಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಹೇಳಿದರು.
ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣ ನವರಕಲ್ಯಾಣ ಮಂಟಪ ದಲ್ಲಿ ಪೂರ್ವಿ ಸುಗಮ ಸಂಗೀತ ಅಕಾ ಡೆಮಿ ಟ್ರಸ್ಟ್, ಯುರೇಕಾ ಅಕಾ ಡೆಮಿ ಹಾಗೂ ಬ್ರಾಹ್ಮಣ ಮಹಾ ಸಭಾದ ಆಶ್ರಯದಲ್ಲಿ ಚಲನಚಿತ್ರ ಸಾಹಿತಿ ಚಿ.ಉದಯಶಂಕರ್ ನೆನಪು ಪ್ರಯುಕ್ತ ಆಯೋಜಿಸಿದ್ದ ಪೂರ್ವಿ ಗಾನಯಾನ – ೮೫ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೂರು ಸಾವಿರಕ್ಕೂ ಹೆಚ್ಚು ಮಧುರಗೀತೆಗಳನ್ನು ರಚನೆ ಮಾಡಿರುವ ಅವರ ಸಾಹಿತ್ಯದಲ್ಲಿ ಜೀವನೋಲ್ಲಾಸವಿದೆ. ಅವರಅಗಲಿ ಕೆಯ ನಂತರವೂ ಇಂದಿಗೂ ನಾವು ಅವರನ್ನು ನೆನಪಿಸಿಕೊಳ್ಳುತ್ತಿದ್ದೇವೆಂ ದರೆ ಅವರು ನೀಡಿರುವ ಸಾಹಿತ್ಯವೇ ಸಾಕ್ಷಿ. ಅವರ ಸಾಹಿತ್ಯ ರಚನೆಗಳು ಅಮರ ಎಂದರು.
ಮುಖ್ಯಅತಿಥಿಯಾಗಿ ಭಾಗ ವಹಿಸಿದ್ದ ಬ್ರಾಹ್ಮಣ ಮಹಾಸಭಾದ ನಿರ್ದೇಶಕ ಕೆ.ಯು.ವಿನೀತ್ಕುಮಾರ್ ಮಾತನಾಡಿ, ಚಿಂತನಹಳ್ಳಿ ಉದಯ ಶಂಕರ್ ಬಹುಮುಖ ಪ್ರತಿಭೆ. ಗೀತರಚನಾಕಾರರು ಮಾತ್ರವಲ್ಲ, ಚಿತ್ರಕಲೆಗೆ ಸಾಹಿತ್ಯ ಬರೆದವರು, ನಟರೂಕೂಡ ಹೌದು. ಮಂಕುದಿಣ್ಣೆ ಚಿತ್ರಕ್ಕೆ ನಿರ್ದೇಶನ ನೀಡಿರುವ ಅವರು ಜೀವನಚೈತ್ರ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವರುಒಟ್ಟು ೯೩ ಚಲನ ಚಿತ್ರಗಳಿಗೆ ಗೀತ ಸಾಹಿತ್ಯರಚನೆ ಮಾಡಿದ್ದು, ಅವುಗಳಲ್ಲಿ ೮೫ ಚಲನ ಚಿತ್ರಗಳು ಡಾ.ರಾಜ್ ಕುಮಾರ್ ಅಭಿನಯಿಸಿದ ಚಲನಚಿತ್ರಗಳೇ ಆಗಿವೆ ಎಂದುಬಣ್ಣಿಸಿದರು. ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿದರು.ರೂಪಾ ನಾಯ್ಕ್ಕಾರ್ಯಕ್ರಮ ನಿರೂಪಣೆ, ಎಂ. ಎಸ್.ಸುಧೀರ್ ಸ್ವಾಗತಿಸಿ, ವಂದಿಸಿದರು.