News Karnataka Kannada
Tuesday, April 30 2024
ಬಾಲಿವುಡ್

ಇಂದು ಸುಶಾಂತ್ ಸಿಂಗ್ ರಜಪೂತ್ ಅವರ ಮೂರನೇ ವರ್ಷದ ಪುಣ್ಯತಿಥಿ

Sushant Singh Rajput
Photo Credit : Twitter

ಸುಶಾಂತ್ ಸಿಂಗ್ ರಜಪೂತ್, ಅಸಾಧಾರಣ ಪ್ರತಿಭಾನ್ವಿತ ನಟ, ಪರದೆಯ ಮೇಲೆ ತನ್ನ ಅದ್ಭುತ ನಟನೆಯಿಂದ ಸಿನಿರಸಿಕರ ಹೃದಯದಲ್ಲಿ ಮರೆಯಲಾಗದ ಪ್ರಭಾವ ಬೀರಿದ ಸ್ಪುರದ್ರೂಪಿ ಕಲಾವಿದ. ಆದರೆ ಇಂತಹ ನಟನ ಅಗಾಧ ಪ್ರತಿಭೆ ಅವರ ದುರಂತ ಮರಣದ ನಂತರ ಜನರಿಗೆ ಅರ್ಥವಾಗಿದ್ದು.

ಸುಶಾಂತ್‌ ಅಗಲಿಕೆಯ ನಂತರ ಜಗತ್ತು ಅವರ ಅಪ್ರತಿಮ ಸಾಮರ್ಥ್ಯವನ್ನು ಅರಿತುಕೊಂಡಿತು ಎನ್ನುವುದೇ ಬೇಸರದ ಸಂಗತಿ. ಇಂದು ಅವರ ಮೂರನೇ ವರ್ಷದ ಪುಣ್ಯತಿಥಿ. ಸುಶಾಂತ್ ಸಿಂಗ್ ಅವರು ಮುಂಬೈನ ಫ್ಲ್ಯಾಟ್​ ಒಂದರಲ್ಲಿ ಉಳಿದುಕೊಳ್ಳುತ್ತಿದ್ದರು. ಅದೇ ಫ್ಲ್ಯಾಟ್​ನಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆದರು. ಇದು ಆತ್ಮಹತ್ಯೆ ಎಂದು ಆರಂಭದಲ್ಲಿ ಊಹಿಸಲಾಗಿತ್ತು.

ಆದರೆ ಇನ್ನೂ ಕೆಲವರು ‘ಸುಶಾಂತ್ ಅವರನ್ನು ಕೊಲೆ ಮಾಡಿ ನಂತರ ಆತ್ಮಹತ್ಯೆ ಎಂದು ಬಿಂಬಿಸುವ ಕೆಲಸ ಆಗಿದೆ’ ಎಂದು ಕೆಲವರು ಆರೋಪಿಸಿದರು. ಈ ಆರೋಪಗಳ ಮಧ್ಯೆ ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಹೆಸರು ಮುನ್ನೆಲೆಗೆ ಬಂತು. ಬಳಿಕ ಅವರನ್ನು ಬಂಧಿಸಿ ವಿಚಾರಣೆ ನಡೆಸಿ, ಈ ಪ್ರಕರಣವನ್ನು ಎನ್​ಸಿಬಿ ಕೂಡ ವಿಚಾರಣೆ ನಡೆಸಿತು.

ಈ ಮಧ್ಯೆ ನ್ಯಾಯ ಕೊಡಿಸಿ ಎನ್ನುವ ಒತ್ತಾಯ ಅಭಿಮಾನಿಗಳಿಂದ ಹೆಚ್ಚಿತು. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಯಿತು. ಸಿಬಿಐ ಪ್ರಕರಣವನ್ನು ತನಿಖೆ ಮಾಡುತ್ತಿದೆ. ಆದರೆ, ಈ ಪ್ರಕರಣದಲ್ಲಿ ಸತ್ಯ ಮಾತ್ರ ಈವರೆಗೆ ಹೊರಬಿದ್ದಿಲ್ಲ.

ಸುಶಾಂತ್ ಸಿಂಗ್ ರಜಪೂತ್ ಅವರು ಚೇತನ್ ಭಗತ್ ಅವರ ಕಾದಂಬರಿ “ದಿ 3 ಮಿಸ್ಟೇಕ್ಸ್ ಆಫ್ ಮೈ ಲೈಫ್” ಅನ್ನು ಆಧರಿಸಿದ “ಕೈ ಪೋ ಚೆ!” ಚಿತ್ರದ ಮೂಲಕ ನಟನೆಯನ್ನು ಪ್ರಾರಂಭಿಸಿದರು. ಬಳಿಕ ಪಿಕೆ, ಎಂ ಎಸ್ ಧೋನಿ, ಚಿಚೋರೆ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಸುಶಾಂತ್ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು