ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಬಜರಂಗಿ ಭಾಯಿಜಾನ್’ ಚಿತ್ರದಲ್ಲಿ ಮುನ್ನಿಯಾಗಿ ನಟಿಸಿಎಲ್ಲರ ಮನಗೆದ್ದ ನಟಿ ಹರ್ಷಾಲಿ ಮಲ್ಹೋತ್ರಾಗೆ ಭಾರತ ರತ್ನ ಡಾ. ಅಂಬೇಡ್ಕರ್ ಪ್ರಶಸ್ತಿ ಒಲಿದು ಬಂದಿದೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಜೊತೆಗೆ, ಪ್ರಶಸ್ತಿಯನ್ನು ಸಲ್ಮಾನ್ ಖಾನ್ಗೆ ಅರ್ಪಿಸಿದ್ದಾರೆ.
13 ವರ್ಷದ ಹರ್ಷಾಲಿ ಚಿತ್ರದಲ್ಲಿ ಪಾಕಿಸ್ತಾನಿ ಮುಸ್ಲಿಂ ಬಾಲಕಿ ಮುನ್ನಿಯಾಗಿ ನಟಿಸಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
ಇದರ ಜೊತೆಗೆ ನಟ ಸಲ್ಮಾನ್ ಖಾನ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಬಜರಂಗಿ ಭಾಯಿಜಾನ್-2 ಚಿತ್ರದಲ್ಲಿ ನಟಿಸಿವುದಾಗಿ ಘೋಷಣೆ ಮಾಡಿದ್ದಾರೆ.