ಮೈಸೂರು: ಶೀಘ್ರದಲ್ಲೇ ಕಿರಗೂರಿನ ಗಯ್ಯಾಳಿಗಳು ತೆರೆ ಕಾಣಲಿದ್ದು, ಇದೊಂದು ಹೆಣ್ಣೊಂದು ಶೋಷಣೆ ವಿರುದ್ಧ ಹೇಗೆ ದನಿ ಎತ್ತಲಿದೆ ಎಂಬುದನ್ನು ವಿಭಿನ್ನವಾಗಿ ತೋರಿಸುವ ಪ್ರಾಂತೀಯ ಚಿತ್ರವೆಂದು ನಟ ಕಿಶೋರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಭಾರತೀಯ ಮೂಲವನ್ನು ತಿಳಿಸಿಕೊಡುವ ಯತ್ನವನ್ನು ಚಿತ್ರ ತಂಡ ಮಾಡಿದ್ದು, ಹೆಣ್ಣಿನ ಮೇಲೆಯಾವ ರೀತಿ ಶೋಷಣೆ ನಡೆಯುತ್ತದೆ ಎಂಬುದು ಸಾಮಾನ್ಯ. ಆದರೆ ತನ್ನ ಮೇಲಿನ ಶೋಷಣೆಯನ್ನು ಹೆಣ್ಣು ಹೇಗೆ ಹೆದರಿಸಬೇಕೆಬುಂದನ್ನು ವಿಶೇಷ ರೀತಿಯಲ್ಲಿ ತೋರಿಸಿಕೊಡುವ ಪ್ರಯತ್ನ ನಮ್ಮದಾಗಿದೆ ಎಂದರು.
ಚಿತ್ರದ ನಿರ್ದೇಶಕಿ ಸಮನ ಕಿತ್ತೂರು ಮಾತನಾಡಿ ಕೆ.ಪಿ ಪೂರ್ಣ ಚಂದ್ರ ತೇಜಸ್ವಿಯವರ ಮೂಲ ಕಥೆ ಆಧರಿತ ಸಿನಿಮಾ ಇದಾಗಿದ್ದು, ಅಪ್ಪಟ್ಟ ಗ್ರಾಮೀಣಾ ಸಿನಿಮಾವಾಗಿದೆ. ಕಿರಗೂರಿನ ಗಯ್ಯಾಳಿಗಳು ಎಂದಾಕ್ಷಣ ಜಗಳಗಟ್ಟಿಯರು ಎಂಬ ಅರ್ಥ ಬರುತ್ತದೆ, ಆದರೆ ಇದರಲ್ಲಿ ನವಿರಾದ ಹಾಸ್ಯವಿದ್ದು, ಲೈಂಗಿಕತೆಯ ಬಗ್ಗೆ ಗ್ರಾಮೀಣ ಭಾಗದ ಮಹಿಳೆಯರು ಯಾವ ರೀತಿ ಮಾತನಾಡುತ್ತಾರೆ ಎಂಬುದನ್ನು ಸಿನಿಮಾದ ಮೂಲಕ ತೆರೆದಿಡಲಾಗಿದೆ ಎಂದರು.
ಒಂದು ವಾರದೊಳಗೆ ರಾಜ್ಯಾದಾದ್ಯಂತ ಚಿತ್ರ ತೆರೆಕಾಣಲಿದ್ದು ಚಿತ್ರೀಕರಣ ಚೆನ್ನಾಗಿ ಮೂಡಿ ಬಂದಿದೆ ಎಂದು ವಿವರಿಸಿದರು.