ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ನಟಿ, ದಿವ್ಯ ಸ್ಪಂದನ(ರಮ್ಯಾ) ಅವರು ಶನಿವಾರ ರಾತ್ರಿ ತಮ್ಮ ಮಂಡ್ಯದ ಮನೆಯನ್ನು ಖಾಲಿ ಮಾಡಿದ್ದಾರೆ.
ಶನಿವಾರ ತಡ ರಾತ್ರಿ ಎರಡು ಲಾರಿಯಲ್ಲಿ ತಮ್ಮ ಮನೆಯಲ್ಲಿನ ವಸ್ತುಗಳನ್ನು ಸಾಗಿಸಿರುವ ದೃಶ್ಯಗಳು ಸೆರೆಯಾಗಿದೆ. ಈ ವೇಳೆ ಲಾರಿ ಚಾಲಕ ಈ ಸಂಬಂಧ ಹೇಳಿಕೆಯನ್ನು ನೀಡಲು ನಿರಾಕರಿಸಿದ್ದಾನೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆದ್ದ ರಮ್ಯಾ ವಿದ್ಯಾನಗರದಲ್ಲಿ ಒಂದು ಮನೆಯನ್ನು ಖರೀದಿಸಿದ್ದರು.
ಈ ಮನೆಯನ್ನೇ ಇದೀಗ ಖಾಲಿ ಮಾಡಿಸಿದ್ದಾರೆ. ರಮ್ಯಾ ರಾಜಕೀಯಕ್ಕೆ ಬರಲು ಸಹಾಯ ಮಾಡಿದ ಕಳೆದ ತಿಂಗಳು ವಿಧಿವಶರಾದ ಮಾಜಿ ಸಚಿವ, ನಟ ಅಂಬರೀಶ್ ಅವರು ಅಂತಿಮ ದರ್ಶವನ್ನು ಪಡೆಯಲು ಬಾರದ ನಟಿ ರಮ್ಯಾ ವಿರುದ್ಧ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.