News Karnataka Kannada
Thursday, May 02 2024
ಮನರಂಜನೆ

ಪ್ರೀತಿ ಮಾಯೆ ಚಿತ್ರದ ಪೋಸ್ಟರ್ ಬಿಡುಗಡೆ

Film
Photo Credit : News Kannada

ಮೈಸೂರು : ಆದಿತ್ಯಲೋಕೇಶ್ ಕ್ರಿಯೇಷನ್ಸ್ ಮತ್ತು ಆದಿತ್ಯಲೋಕೇಶ್ ಯು ಟ್ಯೂಬ್ ಚಾನೆಲ್ ವತಿಯಿಂದ ನಿರ್ಮಿಸಲಾದ ಪ್ರೀತಿ ಮಾಯೆ ಕಿರುಚಿತ್ರದ ಪೋಸ್ಟರ್ ಮತ್ತು ಟ್ರೈಲರ್ ನ್ನು ನಗರದ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗಭವನದಲ್ಲಿ ನಗರಪಾಲಿಕೆ ಸದಸ್ಯ ಬಿ ವಿ ಮಂಜುನಾಥ್ ಅವರು, ಬಿಡುಗಡೆ ಮಾಡಿದರು.

ಈ ಕುರಿತಂತೆ ಮಾತನಾಡಿ ಪ್ರೀತಿಯನ್ನು ಸಮಾಜದಲ್ಲಿ ಸಂಕುಚಿತವಾಗಿ ಕಾಣದೆ ವಿಶಾಲ ಅರ್ಥದಲ್ಲಿ ನೋಡಬೇಕು. ಇಂದು ಜಗತ್ತು ಪ್ರೀತಿ ಮೇಲೆ ನಿಂತಿದೆ ಎಂದು ಅಭಿಪ್ರಾಯ ಪಟ್ಟರು. ಪ್ರೀತಿ ಮಾಯೆ ಎಂಬ ಭಾವನೆ ಇದೆ. ಆದರೆ ಪ್ರೀತಿ ಹೃದಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು ಅದು ಅಂತಾರಾಳದಿಂದ ಬರಬೇಕು, ಕೇವಲ ಹೆಣ್ಣು ಗಂಡಿನ ಬಾಹ್ಯ ಪ್ರೀತಿ ಯನ್ನು ಮಾತ್ರ ಪ್ರೀತಿ ಎಂದು ಭಾವಿಸಲಾಗುತ್ತಿದೆ. ಆದರೆ ಜಗತ್ತೇ ಪ್ರೀತಿಯ ಮೇಲೆ ನಿಂತಿದೆ. ಪ್ರೀತಿ ಇದ್ದರೆ ಅನಾಹುತ ದ್ವೇಷ ಅಸೂಯೆ ಇರುವುದಿಲ್ಲ. ಪ್ರೀತಿ ಮನಸ್ಸುಗಳನ್ನು ಬೆಸೆಯುತ್ತದೆ. ದ್ವೇಷವನ್ನು ತೊಡೆದುಹಾಕುತ್ತದೆ. ಎಲ್ಲರೂ ಸುಖ ಸಂತೋಷದಿಂದ ಬಾಳಬಹುದು.

ಆದಿತ್ಯಲೋಕೇಶ್ ರವರು “ಪ್ರೀತಿ ಮಾಯೆ” ಕಿರುಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದಾರೆ. ಇಂದಿನ ಯುವ ಪೀಳಿಗೆ ಪ್ರೀತಿ ವಿಷಯದಲ್ಲಿ. ಎಚ್ಚರಿಕೆ ಯಿಂದ ಹೆಜ್ಜೆ ಇಡಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳ ಬಾರದು ಎಂದರು.

ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಮಾತನಾಡಿ ಪ್ರೀತಿ ಎಂಬ ಮಾಯೆಗೆ ಸಿಲುಕಿದ ಮೇಲೆ ಪ್ರೀತಿಸಿದಾಕೆಯನ್ನು ಮದುವೆಯಾಗಬೇಕು ಸುಖ ಸಂಸಾರ ನಡೆಸಬೇಕು, ಆದರೆ ಪ್ರೀತಿಸಿ ಕೈಕೊಡುವುದು ತಪ್ಪು, ಪ್ರೀತಿ ಯಲ್ಲಿ ತಪ್ಪು ಆಯ್ಕೆಯಾದರೆ ತಂದೆತಾಯಿ ಬಂಧು ಬಳಗಕ್ಕೆ ಬೇಸರ ಆಗುತ್ತದೆ. ಪ್ರೀತಿಸುವುದು ತಪ್ಪಲ್ಲ ಆದರೆ ಪ್ರೀತಿ ದಡ ಸೇರಬೇಕು ಮನಸ್ಸು ಬೆಸೆಯಬೇಕು ಪ್ರೀತಿ ಮಾಯೆ ಕಿರುಚಿತ್ರ ಸಮಾಜವನ್ನು ಉತ್ತಮದಾರಿಯಲ್ಲಿ ಸಾಗಲು ದಾರಿದೀಪವಾಗಲಿ ಎಂದರು.

ಚಲನಚಿತ್ರನಟ ಕುಮಾರ್ ಅರಸೇ ಗೌಡ ಮಾತನಾಡಿ ಇಂದಿನ ಯುವಪೀಳಿಗೆ ದುಷ್ಟಗುಣಗಳಿಂದ ಹೊರಬರಬೇಕು ಸಾಹಿತ್ಯ ಕಲೆ ಸಂಸ್ಕೃತಿಯನ್ನು ಪ್ರೀತಿಸಬೇಕು ಹಾಗೂ ಪ್ರೋತ್ಸಾಹಿಸ ಬೇಕು ಕಲಾವಿದರು ಸಾಹಿತಿಗಳು ಮಾದರಿಯಾಗಬೇಕು. ಪ್ರತಿಭೆ ಗಳಿಗೆ ಸದಾ ಬೆನ್ನುತಟ್ಟಿ ಪ್ರೋತ್ಸಾಹಿಸ ಬೇಕು ಆದಿತ್ಯಲೋಕೇಶ್ ರವರ ಪ್ರೀತಿ ಮಾಯೆ ಚಿತ್ರ ಪ್ರೀತಿ ಯನ್ನು ಕುರಿತು ಉತ್ತಮ ವ್ಯಾಖ್ಯಾನ ಮಾಡುತ್ತದೆ. ಸಮಾಜಕ್ಕಾಗಿ ಒಳ್ಳೆ ಸಂದೇಶ ನೀಡುತ್ತಿದೆ ಎಂದರು.

ಮೇಲುಕೋಟೆ ವೆಂಗಿಪುರ ಮಠದ ಶ್ರೀ ಇಳಯ್ ಆಲ್ವಾರ್ ಸ್ವಾಮೀಜಿಯವರು ಪ್ರೀತಿ ಮಾಯೆ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.

ಸಮಾಜ ಸೇವಕ ಕಲ್ಯಾಣಕುಮಾರ್ ಅವರಿಗೆ “ಅನ್ನದಾತ “ಪ್ರಶಸ್ತಿನೀಡಿ ಸನ್ಮಾನಿಸಲಾಯಿತು, ಆದಿತ್ಯಲೋಕೇಶ್ ಕ್ರಿಯೇಷನ್ಸ್ನ್ ಮತ್ತು ಆದಿತ್ಯಲೋಕೇಶ್ ಯು ಟ್ಯೂಬ್ ನ ನಿರ್ಮಾಪಕ. ನಿರ್ದೇಶಕ ಆದಿತ್ಯ ಲೋಕೇಶ್, ನಮೋ ಯೋಗ ಭವನ್ ಸಂಸ್ಥಾಪಕ ಯೋಗಪ್ರಕಾಶ್, ಸಾಹಿತಿ ಟಿ ಲೋಕೇಶ್, ಮಿಮಿಕ್ರಿ ಕೃಷ್ಣಮೂರ್ತಿ, ಸಹನಿರ್ಮಾಪಕ ಮಹೇಶ್ ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು