ಮುಂಬೈ: ಪದ್ಮಾವತಿ ಚಿತ್ರ ಇತಿಹಾಸವನ್ನು ಆಧರಿಸಿಲ್ಲ. ಚಿತ್ರವನ್ನು 1540ರಲ್ಲಿ ಸೂಫಿ ಕವಿ ಮಲಿಕ್ ಮುಹಮ್ಮದ್ ಜಯಾಸಿ ರಚಿಸಿರುವ ‘ಪದ್ಮಾವತ್’ ಕಾವ್ಯದ ಆಧಾರದ ಮೇಲೆ ಚಿತ್ರಕಥೆ ರೂಪಿಸಲಾಗಿದೆ’ ಎಂದು ‘ಪದ್ಮಾವತಿ’ ಚಿತ್ರದ ವಿವಾದ ಕುರಿತಂತೆ ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯ ಎದುರು ಗುರುವಾರ ಹಾಜರಾದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹೇಳಿದರು.
ಚಿತ್ರದಲ್ಲಿ ನಾನು ಚಿತ್ರದಲ್ಲಿ ಇತಿಹಾಸಕ್ಕೆ ಧಕ್ಕೆ ತಂದಿಲ್ಲ. ಕೆಲವೊಂದು ಗಾಳಿ ಸುದ್ದಿಗಳಿಂದ ಚಿತ್ರದ ಕುರಿತಾಗಿ ವಿವಾದ ಸೃಷ್ಟಿಯಾಗಿದೆ ಎಂದು ವಿವರಣೆ ನೀಡಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
ಈ ವೇಳೆ ಬಿಜೆಪಿ ಸಂಸದ ಅನುರಾಗ್ ಠಾಕೂರ್, ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ಮತ್ತು ಚಿತ್ರ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಅವರಿದ್ದ ಸಂಸದೀಯ ಸಮಿತಿಯು ಬನ್ಸಾಲಿ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.