ಕಾರವಾರ: ಕರಾವಳಿ ಉತ್ಸವದ ಎರಡನೇ ದಿನದ ಕಾರ್ಯಕ್ರಮ ಭಾಗವಾಗಿ ನಡೆದ ಸ್ಯಾಂಡಲ್ವುಡ್ ಖ್ಯಾತ ಹಿನ್ನೆಲೆ ಗಾಯಕರಾದ ಟಿಪ್ಪು ಮತ್ತು ಸುಪ್ರಿಯಾ ಲೋಹಿತ್ ಅವರ ನೇತೃತ್ವದ ಸಂಗೀತ ತಂಡದ ಕಾರ್ಯಕ್ರಮ ಸೇರಿದ ಸಹಸ್ರಾರು ಜನರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಶುಕ್ರವಾರ ರಾತ್ರಿ ಕಡಲ ತೀರದ ಮಯೂರ ವರ್ಮ ವೇದಿಯಲ್ಲಿ ನಡೆಸದ ಸುಮಾರು ೩ ತಾಸಿಗೂ ಹೆಚ್ಚಿನ ಕಾಲ ನಡೆದ ಗಾಯನ ಕಾರ್ಯಕ್ರಮ ಜನರನ್ನು ಹೆಚ್ಚೆದ್ದು ಕುಣಿಯುವಂತೆ ಮಾಡಿತು.
ಗಾಯಕ ಟಿಪ್ಪು ಹೇ ಪಾರು, ಖಾಲಿ ಕ್ವಾಟರ್ರ್ ಬಾಟ್ಲಿ ಹಾಂಗೆ ಲೈಫು, ನಿನ್ನಿಂದಲೇ ನಿನ್ನಿಂದಲೇ ಹಾಗೂ ಬೃಂದಾವನದ ಚಿತ್ರದ ಹಾಡು ಜನರನ್ನು ರಂಜಿಸಿತು. ಹಾಡಿಗೆ ತಕ್ಕಂತ ಯುವಕರು ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸಿದರು. ಗಾಯಕಿ ಸುಪ್ರಿಯಾರ ನೀ ನಾದೆ ನಾ ಸೇರಿದಂತೆ ಹಾಡಿದ ಸಾಕಷ್ಟು ಗೀತೆಗಳು ಪ್ರೇಕ್ಷಕರಿಗೆ ಮಂತ್ರಮುಗ್ಧರನ್ನಾಗಿತು. ಹಿನ್ನೆಲೆ ಗಾಯಕ ಸಂತೋಷ ಹಾಡಿ ಐರಾವತ್ ಚಲನ ಚಿತ್ರದ ಐರಾವತಾ ಸೇರಿದಂತೆ ಇನ್ನಿತರ ಹಾಡುಗಳು ಉತ್ತಮವಾಗಿ ಸಾದರ ಪಡಿಸಿದರು.
ಇದಲ್ಲದೇ ನಟಿ ಸಂಜನಾ ಅವರು ಕೂಡ ಕೆಲ ಗೀತೆಗಳಿಗೆ ವೇದಿಕೆಯಲ್ಲಿ ನೃತ್ಯ ಮಾಡಿದ್ದು ಪ್ರೇಕ್ಷಕರು ಚಪ್ಪಾಳೆ, ಸಿಳ್ಳೆ ಹೊಡೆದು ಪ್ರೋತ್ಸಾಹಿಸಿದರು.