News Karnataka Kannada
Tuesday, May 07 2024
ಮನರಂಜನೆ

ಗಾಯಕರ ಮಧುರ ಸ್ವಾರಕ್ಕೆ ಹುಚ್ಚೆದ್ದು ಕುಣಿತ ಜನ

Photo Credit :

ಗಾಯಕರ ಮಧುರ ಸ್ವಾರಕ್ಕೆ ಹುಚ್ಚೆದ್ದು ಕುಣಿತ ಜನ

ಕಾರವಾರ: ಕರಾವಳಿ ಉತ್ಸವದ ಎರಡನೇ ದಿನದ ಕಾರ್ಯಕ್ರಮ ಭಾಗವಾಗಿ ನಡೆದ ಸ್ಯಾಂಡಲ್ವುಡ್ ಖ್ಯಾತ ಹಿನ್ನೆಲೆ ಗಾಯಕರಾದ ಟಿಪ್ಪು ಮತ್ತು ಸುಪ್ರಿಯಾ ಲೋಹಿತ್ ಅವರ ನೇತೃತ್ವದ ಸಂಗೀತ ತಂಡದ ಕಾರ್ಯಕ್ರಮ ಸೇರಿದ ಸಹಸ್ರಾರು ಜನರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಶುಕ್ರವಾರ ರಾತ್ರಿ ಕಡಲ ತೀರದ ಮಯೂರ ವರ್ಮ ವೇದಿಯಲ್ಲಿ ನಡೆಸದ ಸುಮಾರು ೩ ತಾಸಿಗೂ ಹೆಚ್ಚಿನ ಕಾಲ ನಡೆದ ಗಾಯನ ಕಾರ್ಯಕ್ರಮ ಜನರನ್ನು ಹೆಚ್ಚೆದ್ದು ಕುಣಿಯುವಂತೆ ಮಾಡಿತು.

ಗಾಯಕ ಟಿಪ್ಪು ಹೇ ಪಾರು, ಖಾಲಿ ಕ್ವಾಟರ್ರ್ ಬಾಟ್ಲಿ ಹಾಂಗೆ ಲೈಫು, ನಿನ್ನಿಂದಲೇ ನಿನ್ನಿಂದಲೇ ಹಾಗೂ ಬೃಂದಾವನದ ಚಿತ್ರದ ಹಾಡು ಜನರನ್ನು ರಂಜಿಸಿತು. ಹಾಡಿಗೆ ತಕ್ಕಂತ ಯುವಕರು ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸಿದರು. ಗಾಯಕಿ ಸುಪ್ರಿಯಾರ ನೀ ನಾದೆ ನಾ ಸೇರಿದಂತೆ ಹಾಡಿದ ಸಾಕಷ್ಟು ಗೀತೆಗಳು ಪ್ರೇಕ್ಷಕರಿಗೆ ಮಂತ್ರಮುಗ್ಧರನ್ನಾಗಿತು. ಹಿನ್ನೆಲೆ ಗಾಯಕ ಸಂತೋಷ ಹಾಡಿ ಐರಾವತ್ ಚಲನ ಚಿತ್ರದ ಐರಾವತಾ ಸೇರಿದಂತೆ ಇನ್ನಿತರ ಹಾಡುಗಳು ಉತ್ತಮವಾಗಿ ಸಾದರ ಪಡಿಸಿದರು.

ಇದಲ್ಲದೇ ನಟಿ ಸಂಜನಾ ಅವರು ಕೂಡ ಕೆಲ ಗೀತೆಗಳಿಗೆ ವೇದಿಕೆಯಲ್ಲಿ ನೃತ್ಯ ಮಾಡಿದ್ದು ಪ್ರೇಕ್ಷಕರು ಚಪ್ಪಾಳೆ, ಸಿಳ್ಳೆ ಹೊಡೆದು ಪ್ರೋತ್ಸಾಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು