ಉಡುಪಿ: ರಾಂಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆ.ಜಿ.ಎಫ್ ಇನ್ನೇನು ಬಿಡುಗಡೆ ಹಿನ್ನಲೆಯಲ್ಲಿ ಯಶ್ ಭಾನುವಾರ ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಈಗಾಗಲೇ ಚಿತ್ರದ ಟ್ರೇಲರ್ ಸಖತ್ ಸದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ನಟ ಯಶ್ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಹೆಲಿಕಾಫ್ಟರ್ ನಲ್ಲಿ ಕೊಲ್ಲೂರಿಗೆ ಬಂದಿಳಿದ ಯಶ್, ದೇವರ ದರ್ಶನ ಪಡೆದು ಬಳಿಕ ದೇವಳದ ವತಿಯಿಂದ ವಿಶೇಷ ಗೌರವ ಸ್ವೀಕರಿಸಿದರು.