ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮೊದಲು ಪ್ರಜಾಕೀಯವೆಂಬ ಪಕ್ಷದೊಂದಿಗೆ ಸುತ್ತಾಡಿ ಹೊಸ ಅಲೆ ಎಬ್ಬಿಸಲು ಪ್ರಯತ್ನಿಸಿದ್ದ ನಟ ಉಪೇಂದ್ರ ಅವರು ತನ್ನ ಹುಟ್ಟುಹಬ್ಬದಂದು ಹೊಸ ಪಕ್ಷದ ಘೋಷಣೆ ಮಾಡಲಿದ್ದಾರೆ.
ಸೆ.18ರಂದು ಉಪೇಂದ್ರ ಅವರ ಹುಟ್ಟುಹಬ್ಬದ ವೇಳೆ ಉತ್ತಮ ಪ್ರಜಾಕೀಯ ಪಾರ್ಟಿ(ಯುಪಿಪಿ)ಯ ಅಧಿಕೃತ ಘೋಷಣೆ ಮಾಡಿ, ಮತ್ತೆ ರಾಜಕೀಯಕ್ಕೆ ಧುಮುಕಲಿದ್ದಾರೆಂದು ವರದಿಗಳು ಹೇಳಿವೆ.
ಕಳೆದ ವಿಧಾನಸಭೆಗೆ ಮೊದಲು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ) ಹುಟ್ಟುಹಾಕಿದ್ದ ಉಪೇಂದ್ರ ಅವರನ್ನು ಪಕ್ಷದ ಅಧ್ಯಕ್ಷರೇ ವಜಾಗೊಳಿಸಿ ವಿವಾದ ಉಂಟಾಗಿತ್ತು.
ಹಣಬಲ, ತೋಳ್ಬಲ ಮತ್ತು ಜಾತಿ ರಾಜಕೀಯವು ಪ್ರಜಾತಂತ್ರಕ್ಕೆ ಮಾರಕವಾಗಿದೆ. ಇದನ್ನು ಅಳಿಸಿ ಹಾಕಿ ಸಂಪೂರ್ಣ ಪಾರದರ್ಶಕವಾಗಿರುವಂತಹ ಆಡಳಿತ ನೀಡುವುದೇ ಪಕ್ಷದ ಉದ್ದೇಶ. ಒಳ್ಳೆಯ ಪ್ರಜಾಕೀಯ ಉದ್ದೇಶ ರೂಪಿಸುವುದು ನನ್ನ ಗುರಿ ಎಂದು ಉಪೇಂದ್ರ ತಿಳಿಸಿದರು.