ಮಂಗಳೂರು: ಚಿನ್ಮಯ ಮಿಷನ್, ಮಂಗಳೂರು ಇವರು 2026ರ ಏಪ್ರಿಲ್ 3ರಿಂದ ಏಪ್ರಿಲ್ 12ರವರೆಗೆ ಚಿನ್ಮಯ ಮಿಷನ್, ಶಾರದ ಸನ್ನಿಧಿ, ರೊಸಾರಿಯೋ ಚರ್ಚ್ ರೋಡ್, ಹೊಯ್ಗೆ ಬಜಾರ್ ನಲ್ಲಿ ಮಹಾಭಾರತದ ಕಥೆಗಳು ಈ ವಿಷಯದ ಕುರಿತು ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದೆ
ಮಹಾಭಾರತದ ಕುರಿತು ವಿಭಿನ್ನ ಕಥೆಗಳು ಮತ್ತು ಪಾತ್ರಗಳ ಮೂಲಕ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವ ಗುರಿಯನ್ನು ಹೊಂದಿರುವ ಈ ಬೇಸಿಗೆ ಶಿಬಿರ, ಇದರ ಜೊತೆಗೆ ಭಗವದ್ಗೀತೆ ಮತ್ತು ವಿಷ್ಣು ಸೂಕ್ತಂ ಪಠಣ ಮತ್ತು ಭಜನೆಗಳನ್ನು ಮಕ್ಕಳಿಗಾಗಿ (ವಯೋಮಿತಿ 6 ರಿಂದ 13 ವರ್ಷ) ಆಯೋಜಿಸಲಾಗಿದೆ. ಮನಸ್ಸಿಗೆ ಮುದ ನೀಡುವ ಆಟಗಳು, ಕ್ರಾಫ್ಟ್, ಡ್ರಾಯಿಂಗ್ ಮುಂತಾದ ಹೆಚ್ಚುವರಿ ಚಟುವಟಿಕೆಗಳನ್ನೂ ನಡೆಸಲಾಗುವುದು.
ಈ ಮಕ್ಕಳ ಬೇಸಿಗೆ ಶಿಬಿರವು ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:00ರವರೆಗೆ ಇರುತ್ತದೆ. ತರಗತಿಯ ನಂತರ ಪ್ರತಿದಿನ ಅನ್ನಪ್ರಸಾದವಿದೆ. ಚಿನ್ಮಯ ಮಿಷನ್ನ ಸಂಸ್ಥಾಪಕ ಸ್ವಾಮಿ ಚಿನ್ಮಯಾನಂದ, ಅವರ ದೊಡ್ಡ ಕೊಡುಗೆ ಎಂದರೆ ಸಾಮಾನ್ಯ ವ್ಯಕ್ತಿಗೆ ಸನಾತನ ಧರ್ಮದ ಗ್ರಂಥಗಳಾದ ಭಗವದ್ಗೀತೆ, ಉಪನಿಷತ್ತುಗಳ ಸಾರವನ್ನು ತಿಳಿಸುವುದು. ಇವರು ಒಬ್ಬ ನಿಪುಣ ಲೇಖಕ, ವಾಗ್ಮಿ ಮತ್ತು ದಾರ್ಶನಿಕ, ಅವರು ಚಿನ್ಮಯ ಮಿಷನ್ ಅನ್ನು ಸ್ಥಾಪಿಸಿದರು, ಅದು ಈಗ ಪ್ರಪಂಚದಾದ್ಯಂತ 300 ಕೇಂದ್ರಗಳನ್ನು ವ್ಯಾಪಿಸಿದೆ.
ಚಿನ್ಮಯ ಮಿಷನ್ ಮಂಗಳೂರು ಮಕ್ಕಳಿಗಾಗಿ ನಡೆಸುವ ಬಾಲ ವಿಹಾರವು ಯುವ ಮನಸ್ಸುಗಳನ್ನು ಮೌಲ್ಯಾಧಾರಿತ ಕಥೆಗಳು, ವಿಷಯಗಳ ಮೂಲಕ ಸಾರ್ವತ್ರಿಕ ಮೌಲ್ಯಗಳೊಂದಿಗೆ ತರಬೇತುಗೊಳಿಸುವುದು, ಸನಾತನ ಧರ್ಮದ ಮಹಿಮೆ ಮತ್ತು ಋಷಿಗಳು ಮತ್ತು ಸಂತರ ನಮ್ಮ ಶ್ರೀಮಂತ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವ ಗುರಿಯನ್ನು ಹೊಂದಿದೆ. ಈ ಜ್ಞಾನವನ್ನು ನೀಡಲು ಅತ್ಯಂತ ಸಮರ್ಪಿತ ಸ್ವಯಂಸೇವಕರ ತಂಡವು ಕಥೆಗಳು, ಭಜನೆಗಳು, ಶ್ಲೋಕಗಳು ಮತ್ತು ಭಗವದ್ಗೀತೆ ಪಠಣಗಳ ಮೂಲಕ ಮಕ್ಕಳೊಂದಿಗೆ ಕೆಲಸ ಮಾಡುತ್ತದೆ.
ಚಿನ್ಮಯ ಮಿಷನ್ ಧ್ಯೇಯವಾಕ್ಯ: ಗರಿಷ್ಠ ಸಂಖ್ಯೆಯ ಜನರಿಗೆ ಗರಿಷ್ಠ ಸಮಯದವರೆಗೆ ಗರಿಷ್ಠ ಸಂತೋಷವನ್ನು ನೀಡುವುದು. ಚಿನ್ಮಯ ಮಿಷನ್ ವೇದಾಂತದ ಜ್ಞಾನ, ಆಧ್ಯಾತ್ಮಿಕ ಅಭ್ಯಾಸಗಳು ಮತ್ತು ಸಮಾಜಕ್ಕೆ ಸೇವೆಯ ಮೂಲಕ ವ್ಯಕ್ತಿಗಳನ್ನು ಪರಿವರ್ತಿಸುವ ದೃಷ್ಟಿಕೋನವನ್ನು ಹೊಂದಿದೆ. ಚಿನ್ಮಯ ಮಿಷನ್ ಮಕ್ಕಳಿಗಾಗಿ ಬಾಲವಿಹಾರ, ಯುವಕರಿಗಾಗಿ ಯುವಕೇಂದ್ರ, ದೊಡ್ಡವರಿಗಾಗಿ ದೇವಿ ಗ್ರೂಪ್ ಮತ್ತು ಸ್ಟಡಿ ಗ್ರೂಪ್ ಗಳನ್ನೂ ನಡೆಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ರೂಪಾ ರಾಣಿ @ 9449388532 ಇವರನ್ನು ಸಂಪರ್ಕಿಸಬಹುದು.

