ಕಾಂತಾವರ: ಗದಗದ ಲಕ್ಷ್ಮೀಶ್ವರ ಆವರಣದಲ್ಲಿ ನಡೆದ ನಾಲ್ಕನೇ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಪ್ರಕೃತಿ ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿಯಾದ ರಿಹಾನ್ ಶೇಕ್ ರವರು 14ರಿಂದ 16 ವರ್ಷದ ಬಾಲಕಯರ ವಿಭಾಗದಲ್ಲಿ ಭಾಗವಹಿಸಿ , ಕುಮಿಟೆ ಯಲ್ಲಿ ಪ್ರಥಮ ಮತ್ತು ಕಟ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಹಾಗೂ ಪ್ರಶಸ್ತಿ ಪತ್ರವನ್ನು ಪಡೆದುಕೊಂಡಿದ್ದಾನೆ. ಅದೇ ರೀತಿಯಾಗಿ ಅಲ್ಲಿ ನಡೆದ 11ರಿಂದ 12 ವರ್ಷ ದ ಬಾಲಕರ ವಿಭಾಗದಲ್ಲಿ ವಿದ್ಯಾರ್ಥಿ ಸಾಹಿಲ್ ರವರು ಕುಮಿಟೆಯಲ್ಲಿ
ಪ್ರಥಮ ಮತ್ತು ಕಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಚಿನ್ನದ ಪದಕ ಹಾಗೂ ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡಿದ್ದಾನೆ.ಇವರಿಗೆ ಮೃಣಾಲಿನಿ ಶೆಟ್ಟಿಯವರು ತರಬೇತುದಾರರಾಗಿದ್ದಾರೆ . ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಹಾಗೂ ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದದಿಂದ ಅಭಿನಂದನೆ ಸಲ್ಲಿಸಿದರು.