ಮಂಗಳೂರು: ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗದವರು ವಿದ್ಯಾರ್ಥಿಗಳಿಗಾಗಿ ರೈತರೊಂದಿಗೆ ಒಂದು ದಿನ ಎನ್ನುವ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನ ಕಾವಲಪಡೂರು ಗ್ರಾಮದಲ್ಲಿ ಆಯೋಜಿಸಿದ್ದರು.
ಕಾರ್ಯಕ್ರಮವನ್ನು ಕಾವಲಪಡೂರು ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಪ್ರಮೋದ್ ರೈ, ಉದ್ಘಾಟಿಸಿ ಭತ್ತದ ಕೃಷಿಯ ಬಗ್ಗೆ
ಪ್ರಾಥಮಿಕ ಮಾಹಿತಿಯನ್ನು ನೀಡಿ ವಿಧ್ಯಾರ್ಥಿಗಳಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರು.
ಕಳೆದ 2 ವರ್ಷಗಳಿಂದ ಕೃಷಿಯು ನಡೆಯದೇ ಇದ್ದ ಗದ್ದೆಯಲ್ಲಿ ವಿದ್ಯಾರ್ಥಿಗಳು ಸ್ಥಳೀಯರ ಸಹಕಾರದಿಂದ ನೇಜಿ ನೆಟ್ಟು ಕೃಷಿಯ
ಪ್ರಾಮುಖ್ಯತೆಯನ್ನು ಅರಿತರು. ಅದೇ ರೀತಿ ವಿದ್ಯಾರ್ಥಿಗಳು ಭತ್ತದ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಹೇಗೆ ಅಳವಡಿಸಬಹುದೆಂದು ತಿಳಿದುಕೊಂಡರು.
ಈ ಕಾರ್ಯಕ್ರಮದಲ್ಲಿ ಸುಮಾರು 100 ಕ್ಕೂ ಅಧಿಕ ವಿಧ್ಯಾರ್ಥಿಗಳು ಹಾಗೂ 7 ಪ್ರಾಧ್ಯಾಪ್ರಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಭವಾನಿ ಹಾಗೂ ಗದ್ದೆಯ ಮಾಲೀಕರಾದ ಶ್ರೀ ವಿಠ್ಠಲ ರೈ ಹಾಗೂ ಶ್ರೀ ಗೋಪಾಲ ರೈ ಮತ್ತು ಮನೆಯವರು ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಲಿಸುವಲ್ಲಿ ಸಹಕಾರಿಯಾದರು.
ಈ ಕಾರ್ಯಕ್ರಮಕ್ಕೆ ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ರಾಜೇಶ ಎಸ್ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಮುಸ್ತಪ್ಪಾ ಬಸ್ತಿಕೋಡಿ ಯವರು ಪ್ರೋತ್ಸಾಹಿಸಿ ಸಂಪೂರ್ಣ ಸಹಕಾರವನ್ನು ನೀಡಿದರು.