ಮಂಗಳೂರು: ಅಥೆನಾ ದಾದಿಯರ ಕಾಲೇಜಿನ 20 ನೇ ಸಾಲಿನ ಪ್ರಥಮ ವರ್ಷದ ಜಿ.ಏನ್ ಮ್. ಹಾಗೂ 19ನೇ ಸಾಲಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಬೆಳಗುವ ಮತ್ತು ಪ್ರತಿಜ್ಞಾವಿಧಿ ಸ್ವೀಕರಿಸುವ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ 10.30ಕ್ಕೆ ಅಥೆನಾ ಆಡಿಟೋರಿಯಂನಲ್ಲಿ ನಡೆಯಿತು.
ಅರ್. ಎಸ್. ಶೆಟ್ಟಿಯನ್ ಅದ್ಯಕ್ಯರಾಗಿ, ಭಗಿನಿ.ಆನ್ರೋಸ್ ಡಿಅಲ್ಮೇಡಾ, ಮಾಜಿ ಪ್ರಾಂಶುಪಾಲರು ,ಅಥೇನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್, ಮುಖ್ಯ ಅತಿಥಿಯಾಗಿ ಆಗಮಿಸಿದರು. ಶ್ರೀಮತಿ ಆಶಾ ಶೆಟ್ಟಿಯಾನ್, ಕಾರ್ಯದರ್ಶಿ, ಡಾ. ಆಶಿತ್ ಶೆಟ್ಟಿಯಾನ್ ಟ್ರಸ್ಟಿ, , ಭಗಿನಿ ದೀಪ ಪೀಟರ್, ಪ್ರಾಂಶುಪಾಲರು ಮತ್ತು. ಭಗಿನಿ. ಐಲೀನ್ ಮಥಿಯಾಸ್ ಉಪಪ್ರಾಂಶುಪಾಲರು , ಡಾ. ನಂದಿನಿ ಸಂಬಂಧಿತ ಆರೋಗ್ಯ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ಮುಖ್ಯ ಅತಿಥಿಗಳು ಫ್ಲೋರೆನ್ಸ್ ನೈಟಿಂಗೇಲ್ ರವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಹೂ ಅಪಿ೯ಸಿ ಗೌರವ ಸಲ್ಲಿಸಿದರು .ಈ ಕಾರ್ಯಕ್ರಮದಲ್ಲಿ 140 ವಿದ್ಯಾರ್ಥಿನಿಯರು ದೀಪ ಬೆಳಗಿಸಿದರು. ಭಗಿನಿ. ದೀಪ ಪೀಟರ್ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಇಂದು ಬೆಳಗಿದ ದೀಪವು ಎಲ್ಲಾ ಅಡೆತಡೆಗಳನ್ನು ಯಶಸ್ವಿಯಾಗಿ ಎದುರಿಸಿ ಎಂದೆಂದಿಗೂ ಬೆಳಗುತಿರಲಿ ಎಂಬ ಸಂದೇಶವನ್ನು ಮುಖ್ಯಅತಿಥಿಯವರು ನೀಡಿದರು.
ಈ ದಿನದ ಮಹತ್ವವನ್ನು ಭಗಿನಿ. ಐಲೀನ್ ಮಥಿಯಾಸ್ರವರು ವಿವರಿಸಿದರು, ಸಹಾಯಕ ಉಪನ್ಯಾಸಕಿ, ಶ್ರೀಮತಿ ಜೆನಿವಿವ್ ಸೆರಾವೋ ಸ್ವಾಗತಿಸಿ ಶ್ರೀಮತಿ ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗದ ಸಹಾಯಕ ಉಪನ್ಯಾಸಕರಾದ ಶ್ರೀಮತಿ ಪ್ರಶ್ವಿನ್ ಡಿ’ಮೆಲ್ಲೋ ವಂದಿಸಿದರು. ಎಂಜೆಲ್ ಬೆನ್ನಿ ಮತ್ತು ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.