ಮಂಗಳೂರು: ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಊರ್ವ ಸ್ಟೋರ್ ಮಂಗಳೂರು ಇವರ ಆಶ್ರಯದಲ್ಲಿ ನಡೆಯುವ ಎರಡು ದಿನಗಳ “ಲೀಡ್ ಟು ವಿನ್”, ಸ್ವಸ್ತಿಕ ಲೀಡರ್ಶಿಪ್ ಬೂಟ್ ಕ್ಯಾಂಪ್ ಎಂಬ ಕಾರ್ಯಗಾರದ ಉದ್ಘಾಟನಾ ಸಮಾರಂಭವು ಹೋಟೆಲ್ ಎ.ಜೆ. ಗ್ರಾಂಡ್, ಮಂಗಳೂರು ಇಲ್ಲಿ ನಡೆಯಿತು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಆರ್. ಡಿ ಕಿಣಿಯವರಿಗೆ “ಸ್ವಸ್ತಿಕ ಉದ್ಯಮ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ಸಂಸ್ಥೆಯ ವಿದ್ಯಾರ್ಥಿಗಳಾದ ಸಂಜಯ್ ಪ್ರಥಮ ಬಿಕಾಂ, ವರುಣ್ ಪ್ರಭು ಮತ್ತು ರಘುನಂದನ್ ಶರ್ಮ ತೃತೀಯ ಬಿಬಿಎ ಇವರ ಹೊಸ ಉದ್ಯಮವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಗಾರವನ್ನು ಉದ್ಘಾಟಿಸಿದ ಶ್ರೀ ರಘುನಾಥ್ ಸೋಮಯಾಜಿ ಜಿ, ವ್ಯವಸ್ಥಾಪನ ನಿರ್ದೇಶಕರು ಸೋಮಯಾಜಿ ಎಸ್ಟೇಟ್ ಇವರು ಮಾತನಾಡಿ ಮನುಷ್ಯನ ಪ್ರಯತ್ನ ಮತ್ತು ದೇವರ ದಯೆ ಇದ್ದರೆ ನಾವು ಏನನ್ನಾದರೂ ಸಾಧಿಸಬಹುದು, ಇಂದು ತಮ್ಮ ಉದ್ಯಮ ಜೀವನವನ್ನು ಪ್ರಾರಂಭಿಸಿದ ಪ್ರಥಮ ಬಿಕಾಂ ವಿದ್ಯಾರ್ಥಿ ಸಂಜಯ್ ಮತ್ತು ಹಂತ ಹಂತವಾಗಿ ಬೆಳೆಯುತ್ತಾ ಬಂದ ತೃತೀಯ ಬಿಬಿಎ ವಿದ್ಯಾರ್ಥಿಗಳಾದ ವರುಣ್ ಪ್ರಭು ಮತ್ತು ರಘುನಂದನ್ ಶರ್ಮ ಇವರಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು.
ಉದ್ಯೋಗಿಯಾಗುವುದು ಬಹಳ ಸುಲಭ ಆದರೆ ಉದ್ಯಮಿಯಾಗುವುದು ಕಷ್ಟ. ಹಠ ಸಾಧನೆಯಿಂದ ಜೀವನದಲ್ಲಿ ಸಫಲತೆಯನ್ನು ಸಾಧಿಸಬಹುದು ಎಂಬುದಾಗಿ ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಾಕ್ಟರ್ ಗಣಪತಿ ಪಿ ವೈದ್ಯಕೀಯ ನಿದೇರ್ಶಕರು, ಮಂಗಳ ಆಸ್ಪತ್ರೆ ಮತ್ತು ಆರ್. ಡಿ ಕಿಣಿ ನಿದೇರ್ಶಕರು ಬೆಲ್ ಪೇಂಟ್ಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಡಾ. ರಾಘವೇಂದ್ರ ಹೊಳ್ಳ ಇವರು ಸ್ವಾಗತಿಸಿ, ದೀಪಾ ಶೆಟ್ಟಿ ವಂದಿಸಿದರು, ಕುಮಾರಿ ಪೂಜ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಾಲಿನಿ ಎನ್ ಹೆಬ್ಬಾರ್, ಸಂಪನ್ಮೂಲ ವ್ಯಕ್ತಿಗಳಾದ ಸಂಧ್ಯಾವರ್ಮ ಹಾಗೂ ರಾಕೇಶ್ ಶರ್ಮ ಉಪಸ್ಥಿತರಿದ್ದರು.