ಮಂಗಳೂರು: ಮಂಗಳೂರಿನ ಯೂನಿವರ್ಸಿಟಿ ಸಂಜೆ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಡಾ ಶಿವರಾಮ ಕಾರಂತರ ಸಭಾಭವನದಲ್ಲಿ ಮಹಿಳಾ ಹಕ್ಕುಗಳ ಸಂರಕ್ಷಣೆ ಎಂಬ ವಿಷಯದ ಕುರಿತಾದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ, ‘ಸಖಿ’ ಕೇಂದ್ರ ಆಡಳಿತಾಧಿಕಾರಿ, ಮನೋವೈದ್ಯಕೀಯ ಮತ್ತು ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಕೆ.ಸಿ. ಅವರು ಯುವಕರ ನೈಜ ಕಥೆಗಳೊಂದಿಗೆ ಜಾಗೃತಿ ಗೋಷ್ಠಿಯನ್ನು ನಡೆಸಿದರು. ಮಹಿಳೆಯರು ತಮ್ಮನ್ನು ತಾವು ಕಿರುಕುಳದಿಂದ ಹೇಗೆ ಕಾಪಾಡಿಕೊಳ್ಳಬಹುದು ಎಂಬ ಬಗ್ಗೆ ಅವರು ಸಲಹೆಗಳನ್ನು ಹಂಚಿಕೊಂಡರು.
ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ ಅಧ್ಯಕ್ಷತೆ ವಹಿಸಿ .ಪ್ರೀತಿ, ಕಾಮ ಮತ್ತು ಸ್ನೇಹದ ನಡುವಿನ ವ್ಯತ್ಯಾಸಗಳನ್ನು ಉಳಿಸಿಕೊಂಡರೆ ಪ್ರಾಣಿಗಳಿಗಿಂತ ಮನುಷ್ಯನು ಉಚ್ಚಯ ಸ್ಥಿತಿಯಲ್ಲಿರುತ್ತಾನೆ ಎಂದು ಸಲಹೆ ನೀಡಿದರು.
ಎನ್.ಎಸ್.ಎಸ್. ನ ವಿದ್ಯಾರ್ಥಿ ನಾಯಕಿ ರೂಪಾ ಕಮ್ರೇಕರ್ ಕಾರ್ಯಕ್ರಮ ನಿರ್ವಹಿಸಿದರು. ಎನ್ ಎಸ್ ಎಸ್ ಅಧಿಕಾರಿ, ಯೋಗ ಉಪನ್ಯಾಸಕ ಅಶೋಕನ್ ಅತಿಥಿಗಳನ್ನು ಪರಿಚಯಿಸಿದರು. ಎನ್ ಎಸ್ ಎಸ್ ವಿದ್ಯಾರ್ಥಿ ಮುಖಂಡ ಜೀತೇಶ್ ವಂದನಾ ನಿರ್ಣಯ ಮಂಡಿಸಿದರು. ಸುಶ್ಮಿತಾ ಮತ್ತು ತಂಡವು ಎನ್ ಎಸ್ ಎಸ್ ಹಾಡನ್ನು ಹಾಡಿತು. ಬೋಧಕ ಮತ್ತು ಬೋಧಕೇತರ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.