ಮಂಗಳೂರು: ವಿಶ್ವ ರಕ್ತದಾನ ದಿನದ ಅಂಗವಾಗಿ ಸಂತ ಅಲೋಶಿಯಸ್ ಕಾಲೇಜು, ಕೋಟೆಕಾರ್ ಕ್ಯಾಂಪಸ್ ನಲ್ಲಿ ಜೂನ್ 14ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೆನ್ ಲೋಕ್ ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ. ಶರತ್ ಕುಮಾರ್ ರಾವ್ ಅವರು, ರಕ್ತದಾನದಿಂದಾಗಿ ಹಲವಾರು ಜೀವಗಳನ್ನು ಉಳಿಸುವುದು ಸಾಧ್ಯ. ಮನುಷ್ಯನ ದೇಹದಲ್ಲಿ ಸುಮಾರು ಆರರಿಂದ್ ಏಳು ಲೀಟರ್ ನಷ್ಟು ರಕ್ತವಿದೆ. ಅದರಲ್ಲಿ ವರ್ಷಕ್ಕೆ ಒಂದಿಷ್ಟನ್ನು ದಾನ ಮಾಡುವುದರಿಂದ ದಾನಿಗೂ ಕೂಡ ಆರೋಗ್ಯದ ದೃಷ್ಟಿಯಿಂದ ಪ್ರಯೋಜನವಿದೆ. ಮಾತ್ರವಲ್ಲ, ಭಾರತದಲ್ಲಿ ಇಂದು ಬೇಡಿಕೆಯನ್ನು ಪೂರೈಸುವಷ್ಟು ರಕ್ತ ಸಿಗುತ್ತಾ ಇಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ಹೆಚ್ಚೆಚ್ಚು ರಕ್ತದಾನ ಮಾಡಲು ಬರಬೇಕಾಗಿದೆ, ಎಂದರು.
ಕಾಲೇಜಿನ ನಿರ್ದೇಶಕರಾದ ಡಾ.(ಫಾ.) ಮೆಲ್ವಿನ್ ಪಿಂಟೊ, ಡೀನ್ ಡಾ. ರಜನಿ ಸುರೇಶ್, ಕಾರ್ಯಕ್ರಮ ಆಯೋಜಕರಾದ ಡಾ. ಬೀನ ಡಾಯಸ್ ಉಪಸ್ಥಿತರಿದ್ದರು. ಸುಮಾರು 100 ವಿದ್ಯಾರ್ಥಿ ಹಾಗೂ ಕಾಲೇಜು ಅಧ್ಯಾಪಕರು ರಕ್ತದಾನ ಮಾಡಿದರು.