News Karnataka Kannada
Saturday, May 04 2024
ಕ್ಯಾಂಪಸ್

ಸಂತ ಅಲೋಶಿಯಸ್ ಕಾಲೇಜು ಕೋಟೆಕಾರ್ ಕ್ಯಾಂಪಸ್ ನಲ್ಲಿ ರಕ್ತದಾನ ಶಿಬಿರ

Untitled 2 Recovered Recovered Recovered
Photo Credit :

ಮಂಗಳೂರು: ವಿಶ್ವ ರಕ್ತದಾನ ದಿನದ ಅಂಗವಾಗಿ ಸಂತ ಅಲೋಶಿಯಸ್ ಕಾಲೇಜು, ಕೋಟೆಕಾರ್ ಕ್ಯಾಂಪಸ್ ನಲ್ಲಿ ಜೂನ್ 14ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೆನ್ ಲೋಕ್ ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ. ಶರತ್ ಕುಮಾರ್ ರಾವ್ ಅವರು, ರಕ್ತದಾನದಿಂದಾಗಿ ಹಲವಾರು ಜೀವಗಳನ್ನು ಉಳಿಸುವುದು ಸಾಧ್ಯ. ಮನುಷ್ಯನ ದೇಹದಲ್ಲಿ ಸುಮಾರು ಆರರಿಂದ್ ಏಳು ಲೀಟರ್ ನಷ್ಟು ರಕ್ತವಿದೆ. ಅದರಲ್ಲಿ ವರ್ಷಕ್ಕೆ ಒಂದಿಷ್ಟನ್ನು ದಾನ ಮಾಡುವುದರಿಂದ ದಾನಿಗೂ ಕೂಡ ಆರೋಗ್ಯದ ದೃಷ್ಟಿಯಿಂದ ಪ್ರಯೋಜನವಿದೆ. ಮಾತ್ರವಲ್ಲ, ಭಾರತದಲ್ಲಿ ಇಂದು ಬೇಡಿಕೆಯನ್ನು ಪೂರೈಸುವಷ್ಟು ರಕ್ತ ಸಿಗುತ್ತಾ ಇಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ಹೆಚ್ಚೆಚ್ಚು ರಕ್ತದಾನ ಮಾಡಲು ಬರಬೇಕಾಗಿದೆ, ಎಂದರು.

ಕಾಲೇಜಿನ ನಿರ್ದೇಶಕರಾದ ಡಾ.(ಫಾ.) ಮೆಲ್ವಿನ್ ಪಿಂಟೊ, ಡೀನ್ ಡಾ. ರಜನಿ ಸುರೇಶ್, ಕಾರ್ಯಕ್ರಮ ಆಯೋಜಕರಾದ ಡಾ. ಬೀನ ಡಾಯಸ್ ಉಪಸ್ಥಿತರಿದ್ದರು. ಸುಮಾರು 100 ವಿದ್ಯಾರ್ಥಿ ಹಾಗೂ ಕಾಲೇಜು ಅಧ್ಯಾಪಕರು ರಕ್ತದಾನ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು