News Karnataka Kannada
Tuesday, April 30 2024
ಕ್ಯಾಂಪಸ್

ಎಸ್‌ ಡಿ ಎಂ ಕಾಲೇಜಿನಲ್ಲಿ ಲ್ಯಾಬ್‌ ನಿರ್ವಾಹಕರಿಗಾಗಿ ತರಬೇತಿ ಕಾರ್ಯಾಗಾರ

Sdm
Photo Credit : News Kannada

ಉಜಿರೆ : ಭೌತಶಾಸ್ತ್ರಕ್ಕೆ ಸಂಬಂಧಿಸಿದ ಪ್ರಾಯೋಗಿಕ ಜ್ಞಾನ ವಿದ್ಯಾರ್ಥಿಗಳಿಗೆ ಒದಗಿಸುವಲ್ಲಿ ಲ್ಯಾಬ್‌ ನಿರ್ವಾಹಕರ ಪಾತ್ರ ಮಹತ್ವದ್ದು ಎಂದು ಎಸ್‌.ಡಿ.ಎಮ್‌ ಅಧ್ಯಯನ ಕೇಂದ್ರದ ಡೀನ್‌ ಡಾ.ವಿಶ್ವನಾಥ್‌ ಪಿ ಹೇಳಿದರು.

ಉಜಿರೆಯ ಎಸ್‌.ಡಿ ಎಂ ಪದವಿ ಕಾಲೇಜಿನ ಸಮ್ಯಕ್‌ ದರ್ಶನದ ವೇದಿಕೆಯಲ್ಲಿ ಭೌತಶಾಸ್ತ್ರ ವಿಭಾಗ ಮತ್ತು ಐಕ್ಯುಎಸಿ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯ ಮಟ್ಟದ ಲ್ಯಾಬ್‌ ನಿ‍ರ್ವಹಣಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಒಳ್ಳೆಯ ಪರಿಸರ ನಿರ್ಮಾಣ ಮಾಡಿಕೊಡುವುದು ಲ್ಯಾಬ್‌ ನಿರ್ವಾಹಕರ ಮತ್ತು ಸಹಾಯಕ ಉಪನ್ಯಾಸಕರ ಕಾರ್ಯವಾಗಿದ್ದು, ಅನುಭವವಿರುವ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಿದರೆ ಲ್ಯಾಬ್‌ ನಿರ್ವಹಣೆಯಲ್ಲಿ ಉತ್ತಮ ಫಲಿತಾಂಶ ಕಾಣಬಹುದು ಎಂದು ಅಭಿಪ್ರಾಯಪಟ್ಟರು, ಎಸ್‌ ಡಿ ಎಂ ಕಾಲೇಜಿನ ಖಾತೆ ಸಹಾಯಕ ದಿವಾಕರ್‌ ಪಟವರ್ಧನ್‌ ಮಾತನಾಡಿ ಪ್ರತಿಯೊಬ್ಬರಲ್ಲೂ ಇರುವ ಜ್ಞಾನವನ್ನು
ಅನ್ವಯಿಸಿದಾಗ ಮಾತ್ರ ಅದಕ್ಕೆ ಮೌಲ್ಯವರ್ಧನೆ ಪ್ರಾಪ್ತವಾಗುತ್ತದೆ ಎಂದು ಹೇಳಿದರು

ಪ್ರಾಶುಂಪಾಲ ಡಾ. ಉದಯಚಂದ್ರ ಪಿ ಎನ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲ್ಯಾಬ್‌ ನಿರ್ವಾಹಕರಿಗೆ ಉಪಕರಣಗಳ ಬಳಕೆಯ ಅರಿವಿರಬೇಕು, ನಿರ್ವಹಣೆಯ ಜ್ಞಾನ ಮತ್ತು ಕೌಶಲ್ಯವಿದ್ದರೆ ಮಾತ್ರ ಪರಿಪೂರ್ಣತೆ ಹೊಂದಲು ಸಹಾಕಾರಿಯಾಗುತ್ತದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಒಟ್ಟು 42 ಲ್ಯಾಬ್‌ ನಿರ್ವಾಹಕರಿಗೆ ಪ್ರಮಾಣಪತ್ರ ನೀಡಲಾಯಿತು ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಲ್ಯಾಬ್‌ ನಿರ್ವಾಹಕ ಜಯಂತ್‌ ಹಾಗೂ ಎಸ್‌ ಡಿ ಎಂ ಕಾಲೇಜಿನ ರಾಸಯನಿಕ ವಿಭಾಗದ ಪರಮೇಶ್ವರ ಮತ್ತು ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಪ್ರಾಧ್ಯಾಪಕ ಎಸ್‌ ಎನ್‌ ಕಾಕತ್ಕರ್‌ ಸ್ವಾಗತಿಸಿ, ಸಂಯೋಜಕಿ ರೇವತಿ ಎಸ್‌ ವಂದಿಸಿ ವಿದ್ಯಾರ್ಥಿನಿ ಅನಘ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು