ಉಜಿರೆ : ನಿರಂತರಓದು ಮತ್ತು ತಿಳಿದುಕೊಳ್ಳುವ ಕುತೂಹಲದೊಂದಿಗೆ ಸಮಗ್ರಜ್ಞಾನ ಪಡೆದು ಮಾಧ್ಯಮರಂಗದಲ್ಲಿ ಪ್ರವೇಶಿಸಲು ಸನ್ನದ್ಧರಾಗಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಸದಾಶಿವ ಶೆಣೈ ನುಡಿದರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಕ್ಷಿಣಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ‘ಮಾಧ್ಯಮ ಮುಂದಿರುವ ಸವಾಲುಗಳು’ಕುರಿತ ವಿಚಾರ ಸಂಕಿರಣ ಮತ್ತು ಸಂವಾದಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಧ್ಯಮ ಲೋಕಕ್ಕೆ ಬರುವ ಕನಸು ಹೊತ್ತ ಯುವ ಪ್ರತಿಭೆಗಳು ಸಾಧಿಸಬೇಕೆನ್ನುವಛಲವನ್ನುಹೊಂದಿರಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮಲ್ಲಿನ ವಿನೂತನ ಯೋಚನೆಗಳೇ ನಮ್ಮ ವ್ಯಕ್ತಿತಯ್ವವನ್ನುಗುರುತಿಸುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಕೆಯ ಹಂತದಿಂದಲೇ ಪ್ರಯೋಗಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.
ಬೇರೆ ಬೇರೆ ಕಾಲದಲ್ಲಿ ತಾಂತ್ರಿಕ ಸ್ವರೂಪ ಬದಲಾದರೂ ಸಮೂಹ ಮಾಧ್ಯಮಗಳಿಗೆ ಬರೆಯುವಾಗ ಮೌಲಿಕ ಆಲೋಚನೆಗಳೇ ನಿರ್ಣಾಯಕವಾಗುತ್ತವೆೆ. ಡಿಜಿಟಲ್ ಯುಗದಲ್ಲಿ ಗುಣಾತ್ಮಕ ವಿಷಯಗಳಿಗಿಂತ ವೇಗವಾಗಿ ಸುದ್ದಿ ನೀಡುವುದೇ ಉತ್ತಮ ಎನ್ನುವ ಭ್ರಮೆ ಕೆಲ ಮಾಧ್ಯಮ ವೃತ್ತಿಪರರಲ್ಲಿದೆ. ಇದರಿಂದಾಚೆಗೆ ಮೌಲ್ಯಯುತ ವಿಷಯಗಳೆ ಪ್ರಾಮುಖ್ಯತೆ ಪಡೆಯುತ್ತವೆಎಂದುಅಭಿಪ್ರಾಯಪಟ್ಟರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀನಿವಾಸ ನಾಯಕ್, ಮಾಧ್ಯಮಗಳ ವಿಪರೀತ ಬೆಳವಣಿಗೆಯು ಸಾಮಾಜಿಕ ಜವಾಬ್ದಾರಿಗಳನ್ನು ಮರೆತುತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ ಎಂದು ವಿಷಾದವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಸಿದ್ದ ಎಸ್.ಡಿ.ಎಮ್ಕಾಲೇಜಿನ ಪ್ರಾಂಶುಪಾಲ ಡಾ.ಪಿ..ಎನ್ಉದಯಚಂದ್ರ ಮಾತನಾಡಿದರು. ಪತ್ರಿಕಾರಂಗವು ಉದ್ಯಮವಾಗಿ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುವ ಪತ್ರಕರ್ತರಿಗೆ ಹಲವಾರು ಸವಾಲುಗಳು ಎದುರಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿಉಜಿರೆಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ‘ನುಡಿ ಮುನ್ನುಡಿ’ ಪ್ರಾಯೋಗಿಕ ಪತ್ರಿಕೆ ಹಾಗು ಎಸ್.ಡಿ.ಎಮ್ ಗೆಜೆಟ್ ಅನ್ನು ಅತಿಥಿಗಳು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರದಡೀನ್ ಡಾ.ವಿಶ್ವನಾಥ ಪಿ,ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾದ ಧನಕೀರ್ತಿ ಆರಿಗ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥಡಾ. ಭಾಸ್ಕರ ಹೆಗಡೆ ಅತಿಥಿಗಳನ್ನು ಸ್ವಾಗತಿಸಿ, ವಿಚಾರ ಸಂಕೀರ್ಣದ ರೂಪು ರೇಷೆಗಳನ್ನು ವಿವರಿಸಿದರು. ವಿದ್ಯಾರ್ಥಿ ಶಂತನು ಕಾರ್ಯಕ್ರಮವನ್ನು ನಿರೂಪಿಸಿದರೆ, ಜಗದೀಶ ಬಳಂಜ ವಂದಿಸಿದರು.