ಮಂಗಳೂರು: ಅಥೇನಾ ಕಾಲೇಜ್ ಬಿ.ಎಸ್.ಸಿ ನರ್ಸಿಂಗ್ನ ಎನ್.ಎಸ್.ಎಸ್ ಘಟಕವು ಜೂನ್ 7, 2022ರಂದು ಕಾಲೇಜು ಸಭಾಂಗಣದಲ್ಲಿ ಒತ್ತಡ ನಿವಾರಣೆಗಾಗಿ ಯೋಗದ ಕುರಿತು ಕಾರ್ಯಾಗಾರವನ್ನು ಆಯೋಜಿಸುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.
ಶ್ರೀ ಶಿವರಾಮ ರೈ, ಯೋಗ ಸಾಧಕ ಮತ್ತು ಪ್ರಾಂಶುಪಾಲರಾದ ಸಿಸ್ಟರ್.ದೀಪಾ ಪೀಟರ್ ಕಾರ್ಯಾಗಾರವನ್ನು ಉಧ್ಘಾಟಿಸಿದರು. ಶ್ರೀ ಶಿವರಾಮ ರೈರವರು ಒತ್ತಡ ಮತ್ತು ನಮ್ಮ ದೈನಂದಿನ ಜೀವನದ ಮೇಲೆ ಅದರ ಪರಿಣಾಮದ ಬಗ್ಗೆ ಸಭಿಕರನ್ನು ಉದ್ದೇಶಿಸಿ ನಂತರ ಯೋಗ ಅಧಿವೇಶನವನ್ನು ನಡೆಸಿದರು.
ಪ್ರೊ. ಶ್ರೀಮತಿ ಹೇಮಲತ.ಜಿ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎಲ್ಲರನ್ನು ಸ್ವಾಗತಿಸಿದರು .ನಾಲ್ಕನೇ ವರ್ಷದ ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿನಿ ಮೆರಿನ್ ಜೋಲಿ ಅವರು ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು. ಕಾಲೇಜು ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.