ದಾವಣಗೆರೆ: ವಾರೆಂಟ್ ಜಾರಿ ಮಾಡಲು ಎರಡು ಸಾವಿರ ರೂ. ಲಂಚ ಪಡೆಯುತ್ತಿದ್ದ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ ಪೇದೆ ಹನುಮಂತಪ್ಪ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಸರಸ್ವತಿ ನಗರದ ನಿವಾಸಿ ಲಕ್ಕಪ್ಪ ಅಂಗಡಿ ಎಂಬುವರು ಸೈಯದ್ ತಹಿರುದ್ದೀನ್ ಎಂಬುವರ ವಿರುದ್ಧ ನ್ಯಾಯಾಲಯದಲ್ಲಿ ಚೆಕ್ಬೌನ್ಸ್ ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ ಸೈಯದ್ ತಹಿರುದ್ದೀನ್ ಅವರ ವಿರುದ್ಧ ವಾರಂಟ್ ನೀಡುವಂತೆ ಪೊಲೀಸ್ ಪೇದೆ ಹನಮಂತಪ್ಪ ಅವರಿಗೆ ಲಕ್ಕಪ್ಪ ಅಂಗಡಿ ವಿನಂತಿಸಿದ್ದರು.
ವಾರಂಟ್ ಜಾರಿ ಮಾಡಲು ಲಕ್ಕಪ್ಪ ಅಂಗಡಿ ಅವರ ಬಳಿ ಪೊಲೀಸ್ ಪೇದೆ ಹನಮಂತಪ್ಪ ಪೋನ್ ಪೇ ಮೂಲಕ ಎರಡು ಸಾವಿರ ರೂ. ಬೇಡಿಕೆ ಪಡೆಯುತ್ತಿದ್ದರು.
ಈ ವೇಳೆ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತ್ರತ್ವದಲ್ಲಿ ಡಿವೈಎಸ್ಪಿ ಕಲಾವತಿ ಇನ್ಸ್ಪೇಕ್ಟರ್ಗಳಾದ ಹೆಚ್ಎಸ್ ರಾಷ್ಟ್ರಪತಿ ಹಾಗೂ ಮಧುಸೂದನ್ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
Ad