ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ನೋಡಲು ನಿತ್ಯ ನೂರಾರು ‘ಡಿ’ ಬಾಸ್ ಅಭಿಮಾನಿಗಳು ಜೈಲಿನತ್ತ ಬರುತ್ತಿದ್ದಾರೆ.
ಅದರಂತೆ ಇಂದು ದರ್ಶನ್ ಅವರನ್ನು ನೋಡಲೇಬೇಕು ಎಂದು ಜೈಲಿನ ಬಳಿ ಬಂದಿರುವ ಜಾಲಹಳ್ಳಿಯ ನಿವಾಸಿ ವಿಶೇಷಚೇತನ ಅಭಿಮಾನಿ ಸೌಮ್ಯ ಎಂಬುವವರು, ನನ್ನ ಅಣ್ಣ ದರ್ಶನ್ ಅವರನ್ನು ನೋಡಲೇಬೇಕು ಎಂದು ಹಠ ಹಿಡಿದಿದ್ದಾರೆ.
‘ಇನ್ನು ದರ್ಶನ್ ಅವರು ಕೊಲೆ ಮಾಡಿಲ್ಲ, ಅವರು ಆರೋಪಿಯಾಗಿದ್ದಾರೆ ಅಷ್ಟೇ. ದರ್ಶನ್ ಅಣ್ಣ ಜೈಲು ಸೇರಿದ್ದಾಗಿನಿಂದಲೂ ಊಟ-ನಿದ್ದೆ ಬಿಟ್ಟಿದ್ದೇನೆ. ನನಗೇನಾದರೂ ಪರವಾಗಿಲ್ಲ. ನನ್ನ ಅಣ್ಣನಿಗೆ ನಾನು ನೋಡಬೇಕು. ಅಧಿಕಾರಿಗಳು ಅನುಮತಿ ನೀಡದಿದ್ದರೂ ನಾನೂ ಇಲ್ಲೇ ಕುಳಿತು ಕೊಳ್ಳುತ್ತೇನೆ’.
‘ದರ್ಶನ್ ಅವರು ಯಾರಿಗೂ ಗೊತ್ತಾಗದೇ ಸಹಾಯ ಮಾಡುವ ಗುಣವಿದೆ. ನಮ್ಮ ಕುಟುಂಬ ನಿರ್ವಹಣೆಗೆ ಆಟೋ ಸಹ ಕೊಡಿಸಿದ್ದಾರೆ. ಈ ವಿಚಾರ ನಾವು ಈಗ ಹೇಳುತ್ತಿದ್ದೇವೆ ಅಸ್ಟೇ. ಪ್ಲೀಸ್ ದರ್ಶನ್ ಅಣ್ಣನನ್ನು ನೋಡಲು ಬಿಡಿ’ ಎಂದು ವಿಶೇಷಚೇತನ ಅಭಿಮಾನಿ ಕಣ್ಣೀರ ಹಾಕಿದ್ದಾರೆ.