ಮಾಸ್ಕೋ: ರಷ್ಯಾದ ಮಿಲಿಟರಿ ನಾಯಕತ್ವವನ್ನು ಉರುಳಿಸಲು ಬಯಸುವ ದಂಗೆಕೋರರ ಕ್ರಮವನ್ನು “ಬೆನ್ನಿಗೆ ಇರಿತ” ಎಂದು ಬಣ್ಣಿಸಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ದೇಶವನ್ನು ವಿಭಜಿಸುವವರಿಗೆ ಶಿಕ್ಷೆಯ ಕುರಿತು ಎಚ್ಚರಿಕೆ ನೀಡಿದ್ದಾರೆ.
ಕೆಲವು ರಷ್ಯನ್ನರು ಕ್ರಿಮಿನಲ್ ಸಾಹಸಕ್ಕೆ ಹೋಗಿದ್ದಾರೆ ಎಂದು ವ್ಯಾಗ್ನರ್ ಕೂಲಿ ಗುಂಪಿನ ಹೆಸರನ್ನು ಉಲ್ಲೇಖಿಸದೇ ಪುಟಿನ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ದಂಗೆಕೋರರ ಕ್ರಮವನ್ನು “ಬೆನ್ನಿಗೆ ಇರಿತ” ಎಂದು ವಿವರಿಸಿದ ರಷ್ಯಾ ಅಧ್ಯಕ್ಷರು, ದೇಶವನ್ನು ವಿಭಜಿಸುವವರಿಗೆ ಶಿಕ್ಷೆಯಾಗುತ್ತದೆ ಎಂದು ತಿಳಿಸಿದ್ದಾರೆ. ವ್ಯಾಗ್ನರ್ ಕೂಲಿ ಸೈನಿಕರ ಗುಂಪನ್ನು ಪರೋಕ್ಷವಾಗಿ ಉಲ್ಲೇಖಿಸಿದ ಪುಟಿನ್ “ಕೆಲವರ ದುರಾಸೆ ದೇಶದ್ರೋಹಕ್ಕೆ ಕಾರಣವಾಗಿದೆ. ಬಿಕ್ಕಟ್ಟು ಎದುರಿಸಲು ಅಗತ್ಯವಿರುವ ಎಲ್ಲ ಆದೇಶಗಳನ್ನು ನೀಡಲಾಗಿದೆ ಎಂದರು.
ಕ್ರೆಮ್ಲಿನ್ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಅವರನ್ನು ಬಂಧಿಸಲು ರಷ್ಯಾ ಸರ್ಕಾರ ಆದೇಶ ನೀಡಿದೆ. ಗುಪ್ತಚರ ದಳ ವ್ಯಾಗ್ನರ್ ಅವರ ತಂಡವನ್ನು ಸಶಸ್ತ್ರ ದಂಗೆ ತಂಡ ಎಂದು ಹೆಸರಿಸಿದೆ.