News Karnataka Kannada
Sunday, May 05 2024
ವಿದೇಶ

ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ನೀರು, ವಿದ್ಯುತ್‌ ನೀಡಲ್ಲ: ಇಸ್ರೇಲ್‌

Israel won't provide water, electricity until hostages are released
Photo Credit : News Kannada

ಜೆರುಸಲೇಂ: ಹಮಾಸ್ ಉಗ್ರಗಾಮಿ ಗುಂಪು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಗಾಜಾ ಪಟ್ಟಿಗೆ ವಿದ್ಯುತ್, ಇಂಧನ ಅಥವಾ ನೀರು ಸರಬರಾಜು ಮಾಡುವುದಿಲ್ಲ ಎಂದು ಇಸ್ರೇಲ್‌ನ ಇಂಧನ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.

ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಸಚಿವರು ಹೀಗೆ ಹೇಳಿದ್ದು “ಇಸ್ರೇಲಿನ ಪ್ರಜೆಗಳನ್ನು ಅಪಹರಣ ಮುಕ್ತಗೊಳಿಸುವವರೆಗೆ ಯಾವುದೇ ವಿದ್ಯುತ್ ಸ್ವಿಚ್ ಆನ್ ಆಗುವುದಿಲ್ಲ, ನೀರಿನ ಸಂಪರ್ಕ ಮರು ತೆರೆಯುವುದಿಲ್ಲ ಮತ್ತು ಯಾವುದೇ ಇಂಧನ ಟ್ರಕ್ (ಗಾಜಾ) ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ. ನಮಗೆ ಯಾರು ಈ ವಿಚಾರದಲ್ಲಿ ಮಾನವೀಯತೆ, ನೈತಿಕತೆ ಬೋಧಿಸುವ ಅವಶ್ಯಕತೆಯಿಲ್ಲ ಎಂದಿದ್ದಾರೆ. ಹಮಾಸ್‌ ಉಗ್ರಗಾಮಿ ಗುಂಪು ಗಾಜಾದಲ್ಲಿ 150 ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಹಮಾಸ್‌ ದಾಳಿಗೆ ಪ್ರತಿಕಾರವಾಗಿ ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಸೋಮವಾರ ಗಾಜಾದ “ಸಂಪೂರ್ಣ ಮುತ್ತಿಗೆ” ಗೆ ಆದೇಶಿಸಿದ್ದರು. ವಿದ್ಯುತ್, ಆಹಾರ, ನೀರು ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸುವುದಾಗಿ ಹೇಳಿದ್ದರು. ಈ ನಡುವೆ ಇಂಧನ ಕೊರತೆಯಿಂದಾಗಿ ಗಾಜಾ ಪಟ್ಟಿಯ ಏಕೈಕ ವಿದ್ಯುತ್ ಕೇಂದ್ರವು ಬುಧವಾರ ಕೆಲಸ ಮಾಡುವುದನ್ನು ನಿಲ್ಲಿಸಿದೆ.

ಪರಿಣಾಮವಾಗಿ, ಆಸ್ಪತ್ರೆಗಳು ಸೇರಿದಂತೆ ಹಮಾಸ್-ನಿಯಂತ್ರಿತ ಎನ್‌ಕ್ಲೇವ್‌ನಲ್ಲಿರುವ ಪ್ರತಿಯೊಂದು ಸೌಲಭ್ಯವು ಜನರೇಟರ್‌ಗಳ ಮೇಲೆ ಅವಲಂಬಿತವಾಗಿದೆ. ಗುರುವಾರ, ರೆಡ್‌ಕ್ರಾಸ್‌ನ ಅಂತರಾಷ್ಟ್ರೀಯ ಸಮಿತಿಯು ಆಸ್ಪತ್ರೆಗಳು ಶವಾಗಾರಗಳಾಗಿ ಬದಲಾಗುವ ಅಪಾಯವಿದೆ ಎಂದು ಹೇಳಿದೆ. “ಗಾಜಾದ ಆಸ್ಪತ್ರೆಗಳು ಶಕ್ತಿ ಕಳೆದುಕೊಂಡಿವೆ, ಇನ್ಕ್ಯುಬೇಟರ್‌ಗಳಲ್ಲಿರುವ ನವಜಾತ ಶಿಶುಗಳು ಅಪಾಯದಲ್ಲಿವೆ. ವಯಸ್ಸಾದ ರೋಗಿಗಗಳು ಆಮ್ಲಜನಕ ಸಂಪರ್ಕವಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಕಿಡ್ನಿ ಡಯಾಲಿಸಿಸ್ ಸಾಧ್ಯವಾಗುತ್ತಿಲ್ಲ. ಎಕ್ಸ್-ರೇ ಮಾಡಲಾಗುತ್ತಿಲ್ಲ ಎಂದು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು