News Karnataka Kannada
Tuesday, May 07 2024
ವಿದೇಶ

50ನೇ ದಿನಕ್ಕೆ ಕಾಲಿಟ್ಟ ಶ್ರೀಲಂಕಾ ಪ್ರತಿಭಟನೆ

Sri Lanka's Election Commission is gearing up for local body elections
Photo Credit :

ಕೊಲಂಬೊ: ದೇಶವು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವುದಕ್ಕೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಾಯಿಸಿ ಸರ್ಕಾರದ ವಿರುದ್ಧ ಜನತೆ ನಡೆಸುತ್ತಿರುವ ಪ್ರತಿಭಟನೆ ಶನಿವಾರ 50ನೇ ದಿನಕ್ಕೆ ಕಾಲಿಟ್ಟಿದೆ.

ಇನ್ನಷ್ಟು ಹೆಚ್ಚಿನ ಜನರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.

ರಾಜಪಕ್ಸ ಕುಟುಂಬ ರಾಜಕೀ ಯ ಕ್ಷೇತ್ರ ತೊರೆದಾಗ ಮಾತ್ರ ನಮ್ಮ ಹೋರಾಟ ಕೊನೆಯಾಗಲಿದೆ. ಅವರ ಎಲ್ಲ ತಪ್ಪುಗಳಿಗಾಗಿ ಅವರನ್ನು ಜನತಾ ನ್ಯಾಯಾಲಯದ ಮುಂದೆ ನಿಲ್ಲಿಸಲಾಗುವುದು’ ಎಂದು ಪ್ರತಿಭಟನಕಾರ ಚಮೀರಾ ಜೀವಂತ ಹೇಳಿದರು.

ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶ ದಿವಾಳಿಯ ಅಂಚಿನಲ್ಲಿದೆ. ಆಹಾರ, ಇಂಧನ, ಔಷಧ, ಅಡುಗೆ ಅನಿಲ, ಬೆಂಕಿ ಕಡ್ಡಿಯಿಂದ ಹಿಡಿದು ಶೌಚಾಲಯದ ಕಾಗದದವರೆಗೂ ಅಗತ್ಯ ವಸ್ತುಗಳ ತೀವ್ರ ಕೊರತೆ ಉಂಟಾಗಿದ್ದು, ಇರುವ ಅಲ್ಪಸ್ವಲ್ಪ ದಾಸ್ತಾನಿಗೆ ಜನರು ಸರದಿಯಲ್ಲಿ ಕಾಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ‘ಜಿಜಿಜಿ’ (ಗೋಟಾ ಗೋ ಗಾಮಾ (ಗ್ರಾಮ)’ ಘೋಷಣೆ ಕೂಗಿದರು.

ಆರ್ಥಿಕ ಬಿಕ್ಕಟ್ಟು ದೇಶದಲ್ಲಿ ರಾಜಕೀಯ ಅಶಾಂತಿ ಸೃಷ್ಟಿಸಿದೆ. ಮಹಿಂದಾ ರಾಜಪಕ್ಸ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದಂತೆ, ಅವರ ತಮ್ಮ ಗೊಟಬಯ ರಾಜಪಕ್ಸ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಪ್ರತಿಭಟನಕಾರರು ಪಟ್ಟುಹಿಡಿದಿದ್ದಾರೆ. ಆದರೆ, ರಾಜೀನಾಮೆಗೆ ಗೊಟಬಯ ನಿರಾಕರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು