ನವದೆಹಲಿ: ಪೂರ್ವ ಉಕ್ರೇನ್ ನ ಕಿರಾಣಿ ಅಂಗಡಿಯ ಮೇಲೆ ರಷ್ಯಾ ಇಂದು(ಅ.05) ನಡೆಸಿದ ದಾಳಿಯಲ್ಲಿ ಕನಿಷ್ಠ 48 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ ಎಂದು ವರದಿಯಾಗಿದೆ.
ದಾಳಿಯನ್ನು ಖಂಡಿಸಿದ ಅಧ್ಯಕ್ಷ ಜೆಲೆನ್ಸ್ಕಿ, ಇದು ರಷ್ಯಾದ ಕ್ರೂರ ಅಪರಾಧ ಮತ್ತು ಸಂಪೂರ್ಣವಾಗಿ ಉದ್ದೇಶಪೂರ್ವಕ ಭಯೋತ್ಪಾದಕ ಕೃತ್ಯ ಎಂದು ಕರೆದಿದ್ದಾರೆ. ಉಕ್ರೇನ್ನ ವಾಯು ರಕ್ಷಣೆಯನ್ನು ಹೆಚ್ಚಿಸಲು ಸಹಾಯ ಮಾಡುವಂತೆ ಜೆಲೆನ್ಸ್ಕಿ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳನ್ನು ಒತ್ತಾಯಿಸಿದರು ಮತ್ತು “ರಷ್ಯಾದ ಭಯೋತ್ಪಾದನೆಯನ್ನು ನಿಲ್ಲಿಸಬೇಕು” ಎಂದು ಪ್ರತಿಪಾದಿಸಿದರು ಎಂದು ಮೂಲಗಳು ವರದಿ ಮಾಡಿವೆ.