News Karnataka Kannada
Friday, May 03 2024
ವಿದೇಶ

ಶ್ರೀಲಂಕಾಕ್ಕೆ ಭಾರತ ಬಿಟ್ಟು ಬೇರೆ ಯಾವ ದೇಶವು ಹಣ ನೀಡುತ್ತಿಲ್ಲ: ರನಿಲ್ ವಿಕ್ರಮಸಿಂಘೆ

Untitled 1
Photo Credit :

ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಆರ್ಥಿಕ ಸಂಕಷ್ಟದಿಂದ ಶ್ರೀಲಂಕಾದ ಜನರು ಜೀವನ ನಡೆಸುವುದೇ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶ ಶ್ರೀಲಂಕಾಕ್ಕೆ ಹಣವನ್ನು ನೀಡುತ್ತಿಲ್ಲ ಎಂದು ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ. ಹಾಗೇ, ದ್ವೀಪ ರಾಷ್ಟ್ರವಾದ ಶ್ರೀಲಂಕಾಕ್ಕೆ ತನ್ನ ಸಹಾಯವನ್ನು ತ್ವರಿತಗೊಳಿಸಲು ಅವರು ಐಎಂಎಫ್​ಗೆ ಒತ್ತಾಯಿಸಿದ್ದಾರೆ.

ಶ್ರೀಲಂಕಾದಲ್ಲಿ ಪೆಟ್ರೋಲ್, ಗ್ಯಾಸ್ ಸಿಲಿಂಡರ್, ಆಹಾರ ಸಾಮಗ್ರಿಗಳಿಗೆ ಭಾರೀ ಕೊರತೆ ಉಂಟಾಗಿದ್ದು, ಪೆಟ್ರೋಲ್ ಬಂಕ್‌ಗಳು, ದಿನಸಿ ಅಂಗಡಿಗಳ ಎದುರು ಕಿಲೋ ಮೀಟರ್​ಗಟ್ಟಲೆ ಜನರು ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ಭಾರತ ನೆರವಿನ ಹಸ್ತ ಚಾಚಿತ್ತು. ಭಾರತದಿಂದ ಹಣಕಾಸಿನ ಸಹಾಯ ಮಾತ್ರವಲ್ಲದೆ 3.3 ಟನ್ ಅಗತ್ಯ ಔಷಧಗಳನ್ನು ನೆರೆಯ ರಾಷ್ಟ್ರವಾದ ಶ್ರೀಲಂಕಾಕ್ಕೆ ಕಳುಹಿಸಲಾಗಿತ್ತು.

ಕಳೆದ ಕೆಲವು ತಿಂಗಳುಗಳಿಂದ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿದೆ. ಇದರಿಂದ ಈಗಾಗಲೇ ಶ್ರೀಲಂಕಾದಲ್ಲಿ ಅಗತ್ಯ ವಸ್ತುಗಳ ಕೊರತೆ ಎದುರಾಗಿದೆ. ಅಗತ್ಯ ವಸ್ತುಗಳ ಅಲಭ್ಯತೆಯಿಂದಾಗಿ ಬೆಲೆ ಏರಿಕೆ ಹೆಚ್ಚಾಗಿದೆ. ಕಳೆದ ಮಾರ್ಚ್‌ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರು ಕೊಲಂಬೊದಲ್ಲಿರುವ ಸುವಾಸೇರಿಯಾ ಪ್ರಧಾನ ಕಚೇರಿಗೆ‌ ಭೇಟಿ ನೀಡಿದ್ದಾಗ ಅಲ್ಲಿ ವೈದ್ಯಕೀಯ ಸವಲತ್ತುಗಳ ಕೊರತೆ ಬಗ್ಗೆ ಅಧಿಕಾರಿಗಳು ಹೇಳಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ಸಚಿವ ಜೈಶಂಕರ್ ನೆರೆಯ ರಾಷ್ಟ್ರಕ್ಕೆ ಸಹಾಯದ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಅಗತ್ಯತೆಗಳನ್ನು ಭಾರತ ಪೂರೈಸಿತ್ತು. ಭಾರತದ ನೌಕಾಸೇನೆಯ ಐಎನ್‌ಎಸ್‌ ಘರಿಯಲ್‌ ಮೂಲಕ ವೈದ್ಯಕೀಯ ಅಗತ್ಯ ಸೌಲಭ್ಯಗಳನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಡಲಾಗಿತ್ತು.

ಬುಧವಾರ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ವಿಕ್ರಮಸಿಂಘೆ, ಸರ್ಕಾರಿ ಸ್ವಾಮ್ಯದ ವಿದ್ಯುತ್ ಘಟಕವಾದ ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ (ಸಿಇಬಿ) ಯ ಎಂಜಿನಿಯರ್‌ಗಳ ಯೋಜಿತ ಮುಷ್ಕರವನ್ನು ಉಲ್ಲೇಖಿಸಿದ್ದು, ದಯವಿಟ್ಟು ಕತ್ತಲನ್ನು ಉಂಟುಮಾಡಬೇಡಿ, ಕರೆಂಟ್ ತೆಗೆಯಬೇಡಿ. ನೀವು ಫಲಕಗಳನ್ನು ಹಿಡಿದು ಮುಷ್ಕರ ಮಾಡಲು ನಮ್ಮ ಅಡ್ಡಿಯಿಲ್ಲ ಎಂದು ಹೇಳಿದ್ದಾರೆ.

ನೀವು ಹೀಗೆ ಮಾಡಿದರೆ ಭಾರತದಿಂದ ಸಹಾಯ ಕೇಳಲು ನನಗೆ ಹೇಳಬೇಡಿ. ಯಾವ ದೇಶವೂ ನಮಗೆ ಇಂಧನ ಮತ್ತು ಕಲ್ಲಿದ್ದಲಿಗೆ ಹಣ ನೀಡುತ್ತಿಲ್ಲ. ಹಣ ನೀಡುತ್ತಿರುವುದು ಭಾರತ ಮಾತ್ರ. ನಮ್ಮ ಭಾರತೀಯ ಕ್ರೆಡಿಟ್ ಲೈನ್ ಈಗ ಅದರ ಅಂತ್ಯದ ಸಮೀಪದಲ್ಲಿದೆ. ಅದನ್ನು ವಿಸ್ತರಿಸುವ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಶ್ರೀಲಂಕಾದ ಪ್ರಧಾನಿ ಹೇಳಿದ್ದಾರೆ.

ಭಾರತವು ಶ್ರೀಲಂಕಾಕ್ಕೆ ಸಾವಿರಾರು ಟನ್‌ಗಳಷ್ಟು ಡೀಸೆಲ್ ಮತ್ತು ಪೆಟ್ರೋಲನ್ನು ಬಿಕ್ಕಟ್ಟು ಪೀಡಿತ ದೇಶ ಶ್ರೀಲಂಕಾಕ್ಕೆ ಸಹಾಯ ಮಾಡಿದೆ. ಆಹಾರ ಮತ್ತು ವೈದ್ಯಕೀಯ ಸರಬರಾಜುಗಳ ಹೊರತಾಗಿ ಸಾಲದಿಂದ ಮುಳುಗಿರುವ ದ್ವೀಪ ರಾಷ್ಟ್ರದಲ್ಲಿ ತೀವ್ರವಾದ ಇಂಧನ ಕೊರತೆಯನ್ನು ನಿವಾರಿಸಲು ಸಹಾಯ ಮಾಡಿದೆ. ನೆರೆಯ ರಾಷ್ಟ್ರದ ಇಂಧನವನ್ನು ಆಮದು ಮಾಡಿಕೊಳ್ಳಲು ಸಹಾಯ ಮಾಡಲು ಭಾರತವು ಕಳೆದ ತಿಂಗಳು ಶ್ರೀಲಂಕಾಕ್ಕೆ ಹೆಚ್ಚುವರಿ USD 500 ಮಿಲಿಯನ್ ಸಾಲವನ್ನು ವಿಸ್ತರಿಸಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು