News Karnataka Kannada
Tuesday, May 07 2024
ವಿದೇಶ

ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ: ಮತದಾನದಿಂದ ಮತ್ತೆ ದೂರವುಳಿದ ಭಾರತ

Russia's aggression on Ukraine, India recuses itself from voting
Photo Credit : IANS

ವಿಶ್ವಸಂಸ್ಥೆ: ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಮೂರನೇ ಎರಡರಷ್ಟು ಮತಗಳಿಂದ ಅಂಗೀಕರಿಸಲ್ಪಟ್ಟ ರಷ್ಯಾ ಮೇಲಿನ ಉಕ್ರೇನ್ ಆಕ್ರಮಣ ವಿರೋಧಿ ನಿರ್ಣಯದಿಂದ ಭಾರತ ಮತ್ತೆ ದೂರವುಳಿದಿದೆ.

ಮತದಾನವು ಆಕ್ರಮಣದ ಮೊದಲ ವಾರ್ಷಿಕೋತ್ಸವದ ಮುನ್ನಾದಿನದಂದು ಗುರುವಾರ ನಡೆಯಿತು. ನಿರ್ಣಯ ನಡೆಯುತ್ತಿದ್ದ ವೇಳೆಯೇ ವಿಶ್ವಸಂಸ್ಥೆಯ ಮತ್ತೊಂದು ಕೊಠಡಿಯಲ್ಲಿ ವಿಶ್ವ ಶಾಂತಿಗಾಗಿ “ಗಾಂಧಿಯನ್ ಟ್ರಸ್ಟಿಶಿಪ್” ಪರಿಕಲ್ಪನೆಯನ್ನು ಅನ್ವೇಷಿಸುವ ಭಾರತದ ಮಿಷನ್ ಪ್ರಾಯೋಜಿಸಿದ ದುಂಡುಮೇಜಿನ ಸಭೆ ನಡೆಯಿತು.

ಆ ಸಭೆಯಿಂದ ಜನರಲ್ ಅಸೆಂಬ್ಲಿ ಚೇಂಬರ್‌ಗೆ ಧಾವಿಸಿದ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಭಾರತದ ಗೈರುಹಾಜರಿಯ ಬಗ್ಗೆ ವಿವರಿಸುತ್ತಾ, “ನಾವು ಯಾವಾಗಲೂ ಮಾತುಕತೆ ಮತ್ತು ರಾಜತಾಂತ್ರಿಕತೆ ಮಾರ್ಗ ಮಾತ್ರ ಯುದ್ಧ ಕೊನೆಗಾಣಿಸಲು ಇರುವ ದಾರಿ ಎಂದು ಪರಿಗಣಿಸುತ್ತೇವೆ ಎಂದರು.

“ನಾವು ಇಂದಿನ ನಿರ್ಣಯದ ಉದ್ದೇಶಿತ ಉದ್ದೇಶಗಳನ್ನು ಗಮನಿಸಿದರೆ, ಶಾಶ್ವತ ಶಾಂತಿಯನ್ನು ಭದ್ರಪಡಿಸುವ ನಮ್ಮ ಅಪೇಕ್ಷಿತ ಗುರಿಯನ್ನು ತಲುಪುವಲ್ಲಿ ಕೆಲ ಅಡೆತಡೆಗಳಿವೆ. ಈ ಕಾರಣಗಳಿಂದ ನಾವು ನಿರ್ಣಯದಿಂದ ದೂರವಿದ್ದೇವೆ ಎಂದು ವಿವರಿಸಿದರು.

“ಇದು ಯುದ್ಧದ ಯುಗವಾಗಲು ಸಾಧ್ಯವಿಲ್ಲ” ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಕಾಂಬೋಜ್‌ ಉಲ್ಲೇಖಿಸಿದರು. ಸಂವಾದ ಮತ್ತು ರಾಜತಾಂತ್ರಿಕತೆಯ ಹಾದಿಗೆ ತುರ್ತು ಮರಳುವ ಅಗತ್ಯವಿದೆ ಎಂದರು. ನಿರ್ಣಯವನ್ನು 141 ಮತಗಳಿಂದ ಅಂಗೀಕರಿಸಲಾಯಿತು, ಏಳು ವಿರುದ್ಧ ಮತಗಳು ಚಲಾವಣೆಯಾದವು. 32 ಮಂದಿ ಪ್ರತಿನಿಧಿಗಳು ಗೈರಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು