ಟೊರೊಂಟೊ: ಮೂಲಭೂತವಾದಿ ಸಿಖ್ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪದ ನಂತರ ಭಾರತ ಸಂಬಂಧ ಹಳಸಿ ದೆ. ಎರಡೂ ರಾಷ್ಟ್ರಗಳ ನಡುವೆ ದಿನಕ್ಕೊಂದರಂತೆ ಆರೋಪ ಪ್ರತ್ಯಾರೋಪಗಳು ಹೊರಬರುತ್ತಿವೆ. ಈ ನಡುವೆ ಕೆನಡಾದ ವ್ಯಾಂಕೋವರ್, ಒಟ್ಟಾವಾ ಮತ್ತು ಟೊರೊಂಟೊ ನಗರಗಳಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಗಳ ಎದುರು ಖಲಿಸ್ತಾನಿ ಬೆಂಬಲಿಗರು ರ್ಯಾಲಿ ನಡೆಸಿದ್ದಾರೆ.
ವ್ಯಾಂಕೋವರ್ನಲ್ಲಿ ಸೋಮವಾರ ಭಾರತದ ಕಾನ್ಸುಲ್ ಜನರಲ್ನ ಹೊರಗೆ ಸುಮಾರು 75 ಜನರು ಖಾಲಿಸ್ತಾನಿ ರ್ಯಾಲಿ ನಡೆಸಿದರು. ಈ ವೇಳೆ ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದರು. ಸಿಖ್-ಕೆನಡಾದ ಪತ್ರಕರ್ತೆ ಮೀರಾ ಬೈನ್ಸ್ ಅವರು ಪ್ರತಿಭಟನೆಯ ವೀಡಿಯೊವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಖಲಿಸ್ತಾನಿ ಬೆಂಬಲಿಗರು ಪ್ರಧಾನಿ ಮೋದಿ ಅವರ ಪೋಸ್ಟರ್ ಗೆ ಚಪ್ಪಲಿ ಹಾರ ಹಾಕುವ ದೃಶ್ಯ ವಿಡಿಯೋದಲ್ಲಿದ್ದೆ. ಅಲ್ಲದೆ ಭಾರತದ ತ್ರಿವರ್ಣ ಧ್ವಜದ ಪೋಸ್ಟರ್ ಮೇಲೆ ನಿಂತು ಘೋಷಣೆ ಕೂಗುತ್ತಿದ್ದಾರೆ. ಖಲಿಸ್ತಾನಿ ಉಗ್ರ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರುಪ್ರತಿಭಟನೆಯ ಸಂದರ್ಭ ಉಪಸ್ಥಿತರಿದ್ದರು. ಇತ್ತೀಚೆಗಷ್ಟೇ ಪನ್ನು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಎಲ್ಲ ಹಿಂದುಗಳು ಭಾರತಕ್ಕೆ ಹಿಂದಿರುಗಬೇಕು ಎಂದು ಎಚ್ಚರಿಕೆ ನೀಡಿದ್ದರು.
Protest in front of the Indian consulate underway on Howe Street in Vancouver. So far a few dozen people but very organized with flags, signs, loud speakers, and PM Modi image on cardboard. pic.twitter.com/DggUoIY2uC
— Meera Bains ਮੀਰਾ (@Meerakati) September 25, 2023