ಕೊಲಂಬೊ: ಮೂರು ದಿನಗಳ ಶ್ರೀಲಂಕಾ ಪ್ರವಾಸದಲ್ಲಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಶುಕ್ರವಾರ ಶ್ರೀಲಂಕಾದ ಜಾಫ್ನಾದಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
‘ಶ್ರೀಲಂಕಾದಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ನಿರ್ಮಲಾ ಸೀತಾರಾಮನ್ ಅವರು, ಜಾಫ್ನಾ ಜಿಲ್ಲೆಯಲ್ಲಿರುವ ನಲ್ಲೂರ್ ಕಂದಸ್ವಾಮಿ ಕೋವಿಲ್ಗೆ ಭೇಟಿ ನೀಡಿದ್ದಾರೆ’ಎಂದು ಅವರ ಕಚೇರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ನಲ್ಲೂರ್ ಕಂದಸ್ವಾಮಿ ಕೋವಿಲ್ ಅಥವಾ ನಲ್ಲೂರ್ ಮುರುಗನ್ ಕೋವಿಲ್ ದೇವಾಲಯವು ಹಿಂದೂಗಳ ಅತ್ಯಂತ ಪ್ರಮುಖ ದೇಗುಲಗಳಲ್ಲಿ ಒಂದಾಗಿದೆ.
ಈ ದೇಗುಲವು ಶ್ರೀಲಂಕಾ ತಮಿಳರು ಹಿಂದೂಗಳು ಎಂದು ಗುರುತಿಸಿಕೊಳ್ಳುವಲ್ಲಿ ಸಾಮಾಜಿಕವಾಗಿ ಅತ್ಯಂತ ಪ್ರಮುಖವಾದುದ್ದಾಗಿದೆ.
Smt @nsitharaman visits Thirukoneswaram Temple in Trincomalee, Sri Lanka. pic.twitter.com/yusvj5qa9G
— Nirmala Sitharaman Office (@nsitharamanoffc) November 2, 2023