ನವದೆಹಲಿ: ಇಸ್ರೇಲ್ ಹಮಾಸ್ ಸಂಘರ್ಷ ಆರಂಭವಾಗಿ ಒಂದು ತಿಂಗಳು ಕಳೆದಿದೆ. ಸಾವಿರಾರು ಅಮಾಯಕರು ಈ ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಭಾರತವು ಯುದ್ಧಪೀಡಿತ ಪ್ಯಾಲೆಸ್ತೀನ್ಗೆ ಎರಡನೇ ಹಂತದ ನೆರವಿನ ಸರಕುಗಳನ್ನು ಭಾನುವಾರ ರವಾನಿಸಿದೆ. “ಪ್ಯಾಲೆಸ್ತೀನ್ ಜನರಿಗೆ ಮಾನವೀಯ ನೆರವು ಒದಗಿಸುವುದನ್ನು ನಾವು ಮುಂದುವರಿಸುತ್ತೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈ ಶಂಕರ್ ಅವರು ಇದನ್ನು ‘ಎಕ್ಸ್’ ಖಾತೆಯಲ್ಲಿ ಖಚಿತಪಡಿಸಿದ್ದಾರೆ.
32 ಟನ್ನಷ್ಟು ನೆರವು ಹೊತ್ತ ಭಾರತೀಯ ವಾಯುಪಡೆಯ ಸಿ 17 ವಿಮಾನವು ಈಜಿಪ್ಟ್ನಲ್ಲಿನ ಎಲ್ ಆರಿಶ್ ವಿಮಾನ ನಿಲ್ದಾಣಕ್ಕೆ ನಿರ್ಗಮಿಸಿದೆ” ಎಂದು ಅವರು ಹೇಳಿದ್ದಾರೆ.
ವೈದ್ಯಕೀಯ ಮತ್ತು ವಿಪತ್ತು ಪರಿಹಾರ ಸೇರಿದಂತೆ ಅಗತ್ಯ ಸಹಾಯದ ವಸ್ತುಗಳ ಮೊದಲ ಕಂತನ್ನು ಅಕ್ಟೋಬರ್ 22ರಂದು ಭಾರತ ಕಳುಹಿಸಿತ್ತು. ಎಲ್ ಆರಿಶ್ ವಿಮಾನ ನಿಲ್ದಾಣವು ಗಾಜಾ ಪಟ್ಟಿಯ ಜತೆ ಈಜಿಪ್ಟ್ ಗಡಿ ಹಂಚಿಕೊಂಡಿರುವ ರಾಫಾಹ್ದಿಂದ ಸುಮಾರು 45 ಕಿಮೀ ದೂರದಲ್ಲಿದೆ. ಇದು ಗಾಜಾಕ್ಕೆ ಮಾನವೀಯ ನೆರವು ಪೂರೈಸಲು ಇರುವ ಏಕೈಕ ಕ್ರಾಸಿಂಗ್ ಜಾಗವಾಗಿದೆ. ಆದರೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಆರಂಭವಾದ ಸಂದರ್ಭದಿಂದ ಇದು ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿಲ್ಲ.
We continue to deliver humanitarian assistance to the people of Palestine.
Second @IAF_MCC C17 aircraft carrying 32 tonnes of aid departs for the El-Arish Airport in Egypt. pic.twitter.com/bNJ2EOJPaW
— Dr. S. Jaishankar (Modi Ka Parivar) (@DrSJaishankar) November 19, 2023