ಕರಾಚಿ: ಭಾರತಕ್ಕೆ ಬೇಕಾಗಿದ್ದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಭಯೋತ್ಪಾದಕನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ಲಷ್ಕರ್-ಎ-ತೋಯ್ಬಾದ ಪ್ರಮುಖ ಭಯೋತ್ಪಾದಕ ಅದ್ನಾನ್ ಅಹ್ಮದ್ ಅಲಿಯಾಸ್ ಹಾಂಜಾಲಾ ಅದ್ನಾನ್ನನ್ನು ಕರಾಚಿಯಲ್ಲಿ ಅಪರಿಚಿತರು ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.
2016ರಲ್ಲಿ ಪಾಂಪೋರ್ನಲ್ಲಿ ಸಿಆರ್ಪಿಸಿ ಬೆಂಗಾವಲು ಪಡೆಯ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಈ ಹಂಜಾಲಾ ಅದ್ನಾನ್. ದಾಳಿಯಲ್ಲಿ 8 ಯೋಧರು ಹುತಾತ್ಮರಾಗಿ 22ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಗಾಯಗೊಂಡಿದ್ದರು. 2015ರಲ್ಲಿ ಉಧಂಪುರದಲ್ಲಿ ಬಿಎಫ್ಎಸ್ ಬೆಂಗಾವಲು ವಾಹನದ ಮೇಲೂ ದಾಳಿ ಮಾಡಿದ್ದ. ಹಾಂಜಾಲಾನ ಪೈಶಾಚಿಕ ಕೃತ್ಯದಿಂದ ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮರಾಗಿ, 13 ಸೈನಿಕರು ಗಾಯಗೊಂಡಿದ್ದರು.
ಈ ದಾಳಿಯ ತನಿಖೆ ನಡೆಸಿದ್ದ ರಾಷ್ಟ್ರೀಯ ಭದ್ರತಾ ಸಂಸ್ಥೆ 2015, ಆಗಸ್ಟ್ 6 ರಂದು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿತ್ತು. ಜಾರ್ಜ್ಶೀಟ್ನಲ್ಲಿ ಹಾಂಜಾಲಾ ಪಾತ್ರ ಇರೋದನ್ನು ಖಚಿತ ಪಡಿಸಿತ್ತು. ಸದ್ಯ ಈತನನ್ನು ರಾಚಿಯಲ್ಲಿ ಅಪರಿಚಿತರು ಗುಂಡಿಟ್ಟು ಹತ್ಯೆಗೈದಿದ್ದಾರೆ.