ನವದೆಹಲಿ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಾಡಾನೆಯೊಂದು ತುಳಿದು ಕೊಂದಿದೆ. ಸುಧಾಕರ್ ಬಿ ಅತ್ರಾಮ್ ಎಂಬುವರು ಅರಣ್ಯ ಇಲಾಖೆಯಲ್ಲಿ ಚಾಲಕರಾಗಿದ್ದರು. ಪಾಲಸಗಾಂವ್ ಪ್ರದೇಶಕ್ಕೆ ಕಾಡಾನೆಗಳು ನುಗ್ಗಿವೆ ಎಂದು ಗ್ರಾಮಸ್ಥರು ದೂರು ನೀಡಿದ್ದು, ಈ ಕಾರಣದಿಂದ ಅರಣ್ಯ ಅತ್ರಾಮ್ ಸೇರಿದಂತೆ ಅರಣ್ಯ ಇಲಾಖೆ ತಂಡವು ಪಾಲಸಗಾಂವ್ ನಲ್ಲಿ ಆನೆ ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತ್ತು. ಈ ವೇಳೆ ಚಾಲಕ ಅತ್ರಾಮ್ ಇಲಾಖಾ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ವೀಡಿಯೊ ರೆಕಾರ್ಡ್ ಮಾಡಲು ಪ್ರಾರಂಭಿಸಿದರು. ಅಷ್ಟರಲ್ಲಿ ಆನೆಯೊಂದು ಅವರತ್ತ ಓಡಿಬಂದಿದೆ. ಈ ವೇಳೆ ಇತರ ಸಿಬ್ಬಂದಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೂ ಅತ್ರಾಮ್ ಎಡವಿ ಬಿದ್ದಿದ್ದು, ಆನೆ ಅವರನ್ನು ತುಳಿದು ಸಾಯಿಸಿದೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದೆರಡು ವರ್ಷಗಳಿಂದ ಒಡಿಶಾದ ಆನೆಗಳು ಮಹಾರಾಷ್ಟ್ರಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡುತ್ತಿರುವ ಘಟನೆ ನಡೆಯುತ್ತಿದೆ. ಸುಮಾರು ಎರಡು ತಿಂಗಳ ಹಿಂದೆ ಕಾಡಾನೆ ದಾಳಿಯಿಂದ ವೃದ್ಧರೊಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.
मागील दोन वर्षांपासून गडचिरोलीच्या जंगलात वाघापाठोपाठ रानटी हत्तींचा कळप मुक्कामी आहे. त्यामुळे या कळपाच्या जवळ जाणे टाळायला हवे, असे वनविभाग वारंवार सांगत असते. पण आज त्यांचाच कर्मचारी व्हिडिओ काढण्याच्या नादात आपला जीव गमावून बसला. दुःखद…!#forest #elephant #gadchiroli pic.twitter.com/Y3KGGxYl8x
— Sumit Pakalwar (@PakalwarSumit) September 16, 2023