ಚಿಕ್ಕಮಗಳೂರು: ಬೈಂದೂರು ಮೂಲದ ಬೆಂಗಳೂರಿನ ಉದ್ಯಮಿಗೆ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಮತ್ತು ಗೋವಿಂದ ಬಾಬು ಆಪ್ತ ಪ್ರಸಾದ್ ನಡುವೆ ನಡೆದಿದ್ದ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು. ಇದೀಗ ಚೈತ್ರಾ ಹಾಗೂ ಪ್ರಸಾದ್ ನಡುವೆ ನಡೆದಿರುವ ಮತ್ತೊಂದು ಆಡಿಯೋ ಬಹಿರಂಗವಾಗಿದೆ.
ಅಣ್ಣಾ ಬೆಳಿಗ್ಗೆ ಫೋನ್ ಮಾಡಿದ್ದರು, ಗಗನ ಹತ್ತಿರವು ಮಾತನಾಡಿದ್ದಾರೆ. ಟಿಕೆಟ್ ವಿಚಾರವಾಗಿ ಡೆಲ್ಲಿಯಿಂದ ಮಾತುಕತೆ ಪೂರ್ಣಗೊಂಡಿದೆ. ಡೆಲ್ಲಿಯಿಂದ ಫೋನ್ ಬಂದಿದೆ ಅಂದರೆ ಕೆಲಸ ಆಗಿದೆ ಎಂದರ್ಥ. ಡೆಲ್ಲಿಯಿಂದ ಫೋನ್ ಮಾಡಿದರೆ ಗೋವಿಂದ ಪೂಜಾರಿಗೆ ಪಿಕ್ ಮಾಡಲು ಹೇಳು. ಸ್ವಾಮೀಜಿ ಪೂಜೆಯಲ್ಲಿದ್ದಾರೆ ಮತ್ತೆ ಮಾತನಾಡುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ನಡೆಯುವ ಸರ್ವೇ ಕಾರ್ಯವನ್ನು ನಾವು ನೋಡಿಕೊಂಡರೆ ಸಾಕು. ದೇವರ ಮೇಲೆ ಭಾರ ಹಾಕಿ ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ ಎಂದಿದ್ದಾರೆ.