News Karnataka Kannada
Saturday, May 04 2024
ದೇಶ

ಮಣಿಪುರ ಹಿಂಸಾಚಾರ: 87 ಮೃತದೇಹಗಳ ಸಾಮೂಹಿಕ ಅಂತ್ಯಕ್ರಿಯೆ

Manipur
Photo Credit : News Kannada

ಇಂಫಾಲ್: ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಜನಾಂಗೀಯ ಹಿಂಸಾಚಾರಕ್ಕೆ ಬಲಿಯಾದ 87 ಝೋ-ಕುಕಿ ಸಂತ್ರಸ್ತರ ಮೃತದೇಹಗಳನ್ನು ಕೋರ್ಟ್​ ನಿರ್ದೇಶನದಂತೆ ಅಂತ್ಯಕ್ರಿಯೆ ಮಾಡಲಾಗಿದೆ.

ರಾಜ್ಯದಲ್ಲಿ ಭಾರೀ ಗಲಾಟೆಯಿಂದ ಮೇ 3ರಂದು ಜನಾಂಗೀಯ ಹಿಂಸಾಚಾರದಿಂದ 87 ಮಂದಿ ಮೃತಪಟ್ಟಿದ್ದರು. ಈ ಎಲ್ಲ ಮೃತದೇಹಗಳನ್ನು ಇಲ್ಲಿವರೆಗೆ ಶವಾಗಾರಗಳಲ್ಲಿ ಇಡಲಾಗಿತ್ತು. ಸದ್ಯ ಸುಪ್ರೀಂಕೋರ್ಟ್​ ಈ ಸಂಬಂಧ ಅಂತಿ ಸಂಸ್ಕಾರಕ್ಕೆ ಹಾಗೂ ಸಮಾಧಿ ಸ್ಥಳವನ್ನ ಖಚಿತಪಡಿಸಿದೆ.

ಈ ಹಿನ್ನೆಲೆಯಲ್ಲಿ ಇಂಫಾಲ್‌ನ ವಿವಿಧ ಶವಾಗಾರಗಳಿಂದ ನಲವತ್ತೊಂದು ಶವಗಳನ್ನು ವಿಮಾನದ ಮೂಲಕ ತರಲಾಗಿತ್ತು. ಇನ್ನು 46 ಮೃತದೇಹಗಳನ್ನ ಚುರಚಂದಪುರ ಜಿಲ್ಲಾ ಆಸ್ಪತ್ರೆಯಿಂದ ತಂದು ಕೋರ್ಟ್ ನಿರ್ದೇಶನದಂತೆ​ ಒಟ್ಟಿಗೆ ಸಾಂಗ್ಪಿ ಜಿಲ್ಲೆಯ ಸೆಹ್ಕೆನ್‌ನ ಪ್ರದೇಶದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಯಿತು.

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ ಸಾಕಷ್ಟು ಆಸ್ತಿ-ಪಾಸ್ತಿಗಳು ನಾಶವಾಗಿದ್ದವು. ಎಷ್ಟೋ ಮನೆಗಳಿಗೆ ಬೆಂಕಿ ಕೂಡ ಹಚ್ಚಿ ವಿಕೃತಿ ಮೆರೆಯಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು