ಪಶ್ಚಿಮ ಬಂಗಾಳ: ಮುಖ್ಯಮಮತ್ರಿ ಮಮತಾ ಬ್ಯಾನರ್ಜಿ ಹಣೆಗೆ ಗಾಯವಾಗಿದ್ದು, ಅವರನ್ನು ಯಾರೋ ಹಿಂದಿನಿಂದ ನೂಕಿದಂತಾಗಿ ಬಿದ್ದಿದ್ದಾರೆ ಎಂದಿರುವ ಬಿಜೆಪಿ ತನಿಖೆಗೆ ಆಗ್ರಹಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್, ಈ ವಿಷಯದಲ್ಲಿ ರಾಜಕೀಯ ಮಾಡದಂತೆ ಬಿಜೆಪಿಗೆ ಎಚ್ಚರಿಸಿದೆ.
ʼಮಮತಾ ತಮ್ಮ ಮನೆಯಲ್ಲಿ ಬಿದ್ದು ಹಣೆ ಮತ್ತು ಮೂಗಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹಿಂದಿನಿಂದ ಯಾರೋ ತಳ್ಳಿದಂತಾಗಿ ಅವರು ಬಿದ್ದಿದ್ದಾರೆʼ ಎಂದು SSKM ಆಸ್ಪತ್ರೆಯ ನಿರ್ದೇಶಕ ಮನಿಮೋಯ್ ಬಂಡೋಪಾಧ್ಯಾಯ ಮಾಹಿತಿ ನೀಡಿದರು.
ಆಸ್ಪತ್ರೆಯ ನಿರ್ದೇಶಕರು ತಮ್ಮ ಹೇಳಿಕೆಯನ್ನು ಇದ್ದಕ್ಕಿದ್ದಂತೆ ಬದಲಿಸಿದ್ದು ಅನುಮಾನಗಳಿಗೆ ಎಡೆ ಮಾಡಿದೆ. ಇದನ್ನು ಗಂಭಿರವಾಗಿ ಪರಿಗಣಿಸಿ ಸೂಕ್ತ ತನಿಖೆಯ ಮೂಲಕ ಸತ್ಯವನ್ನು ಬಯಲು ಮಾಡಬೇಕೆಂದು ಬಿಜೆಪಿ ನಾಯಕ ದಿಲೀಪ್ ಘೋಷ್ ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ TMC ನಾಯಕ ಶಶಿ ಪಂಜಾ, ಆರೋಗ್ಯದಲ್ಲಿ ಏರುಪೇರಾದಾಗ ಇಂತಹ ಅನುಭವಗಳಾಗುವುದು ಸಹಜ. ಈ ವಿಷಯವನ್ನು ರಾಜಕೀಯಗೊಳಿಸಬಾರದು ಎಂದಿದ್ದಾರೆ.