ಹರಿದ್ವಾರ:ಆಹಾರ ಅರಸಿಕೊಂಡು ನಾಡಿನತ್ತ ಬಂದ ಕಾಡಾನೆಯೊಂದು ಕೋರ್ಟ್ ಆವರಣದೊಳಕ್ಕೆ ನುಗ್ಗಿ ಉಪಟಳವಿಟ್ಟಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಉತ್ತರಾಖಂಡದ ಹರಿದ್ವಾರದಲ್ಲಿರುವ ರೋಶನಾಬಾದ್ ಕೋರ್ಟ್ ಆವರಣ ಬಳಿ ಕಾಡಾನೆ ಸಾಗಿದೆ. ಈ ವೇಳೆ ಜನರು ಭಯಭೀತರಾಗಿ ಕಾಡಾನೆಯನ್ನು ಓಡಿಸಲು ಶಬ್ಧ ಮಾಡಿದ್ದಾರೆ. ಇದರಿಂದ ಕೋಪಗೊಂಡ ಕಾಡಾನೆ ಕೋರ್ಟ್ ಮುಂಭಾಗ ಇದ್ದ ಗೇಟು ಮುರಿದು ಆವರಣದೊಳಕ್ಕೆ ಪ್ರವೇಶಿಸಿದೆ.
ರಾಜಾಜಿ ಹುಲಿ ಸಂರಕ್ಷಣಾ ಪ್ರದೇಶದಿಂದ ಕಾಡು ಪ್ರಾಣಿಗಳು ಪಕ್ಕದ ನಗರದತ್ತ ಎಂಟ್ರಿ ನೀಡುತ್ತಿವೆ. ಹೀಗಾಗಿ ಕಾಡಾನೆ ಕೂಡ ಕಾಣಿಸಿಕೊಂಡಿದ್ದು, ನ್ಯಾಯಾಲಯ ಆವರಣದಲ್ಲಿ ಉಪಟಳ ನೀಡಿದೆ. ಮಾತ್ರವಲ್ಲದೆ, ಅಲ್ಲೇ ಹತ್ತಿರವಿದ್ದ ಜಿಲ್ಲಾ ನ್ಯಾಯಾಲಯಕ್ಕೂ ದಾಳಿ ಮಾಡಿ ಧ್ವಂಸ ಮಾಡಿದೆ. ಇನ್ನು ಕಾಡಾನೆಯ ಉಪಟಳದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
In areas adjacent to jungles, there have been many occurrences where an Elephant made its way into Haridwar, in this instance it was the District Collector's office, the Elephant advanced towards the main gate of the District Court Judiciary and forcefully opened the closed gate.… pic.twitter.com/zuy8OhL7og
— Dr. PM Dhakate (@paragenetics) December 27, 2023