News Karnataka Kannada
Friday, May 03 2024
ಉತ್ತರಖಂಡ

ಉತ್ತರಾಖಂಡ್‌ ಭೂಕುಸಿತ: 11 ನೇಪಾಳಿಗಳು ನಾಪತ್ತೆ

Uttarakhand landslide: 11 Nepalis missing
Photo Credit : News Kannada

ಕಾಠ್ಮಂಡು: ಉತ್ತರಾಖಂಡದಲ್ಲಿ ಉಂಟಾದ ಭೂಕುಸಿತದಲ್ಲಿ ಕನಿಷ್ಠ 11 ನೇಪಾಳಿ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ. ಉತ್ತರಾಖಂಡದ ಗೌರಿ ಕುಂಡ್ ಪಟ್ಟಣದಲ್ಲಿ ಗುರುವಾರ ರಾತ್ರಿ 11.30ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಈ ದುರಂತದಲ್ಲಿ ನೇಪಾಳದವರು ಸೇರಿದಂತೆ ಹಲವು ದೇಶದ ಪ್ರಜೆಗಳು ಕಾಣೆಯಾಗಿದ್ದಾರೆ.

ಕೇದಾರನಾಥಕ್ಕೆ ಚಾರಣಿಗರಿಗೆ ಮೂಲ ಶಿಬಿರವಾಗಿ ಕಾರ್ಯನಿರ್ವಹಿಸುವ ಪಟ್ಟಣವಾದ ಗೌರಿ ಕುಂಡ್‌ನಲ್ಲಿರುವ ಮೂರು ಹೋಟೆಲ್‌ಗಳು ಭೂಕುಸಿತದಿಂದ ಕೊಚ್ಚಿಹೋಗಿದ್ದು ನೇಪಾಳ ಮೂಲದ ಜನರು ಮಣ್ಣಿನಡಿ ಹೂತುಹೋಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣ್ಣಿನಡಿಯಲ್ಲಿ ಕಾಣೆಯಾದವರಲ್ಲಿ ಹೆಚ್ಚಿನವರು ಕರ್ನಾಲಿ ಪ್ರಾಂತ್ಯದ ಪರ್ವತ ಜಿಲ್ಲೆ ಜುಮ್ಲಾದ ಪಟರಾಸಿಯವರು. ಅವರು ಕೇದಾರನಾಥಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು