ಕಾಠ್ಮಂಡು: ಉತ್ತರಾಖಂಡದಲ್ಲಿ ಉಂಟಾದ ಭೂಕುಸಿತದಲ್ಲಿ ಕನಿಷ್ಠ 11 ನೇಪಾಳಿ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ. ಉತ್ತರಾಖಂಡದ ಗೌರಿ ಕುಂಡ್ ಪಟ್ಟಣದಲ್ಲಿ ಗುರುವಾರ ರಾತ್ರಿ 11.30ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಈ ದುರಂತದಲ್ಲಿ ನೇಪಾಳದವರು ಸೇರಿದಂತೆ ಹಲವು ದೇಶದ ಪ್ರಜೆಗಳು ಕಾಣೆಯಾಗಿದ್ದಾರೆ.
ಕೇದಾರನಾಥಕ್ಕೆ ಚಾರಣಿಗರಿಗೆ ಮೂಲ ಶಿಬಿರವಾಗಿ ಕಾರ್ಯನಿರ್ವಹಿಸುವ ಪಟ್ಟಣವಾದ ಗೌರಿ ಕುಂಡ್ನಲ್ಲಿರುವ ಮೂರು ಹೋಟೆಲ್ಗಳು ಭೂಕುಸಿತದಿಂದ ಕೊಚ್ಚಿಹೋಗಿದ್ದು ನೇಪಾಳ ಮೂಲದ ಜನರು ಮಣ್ಣಿನಡಿ ಹೂತುಹೋಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣ್ಣಿನಡಿಯಲ್ಲಿ ಕಾಣೆಯಾದವರಲ್ಲಿ ಹೆಚ್ಚಿನವರು ಕರ್ನಾಲಿ ಪ್ರಾಂತ್ಯದ ಪರ್ವತ ಜಿಲ್ಲೆ ಜುಮ್ಲಾದ ಪಟರಾಸಿಯವರು. ಅವರು ಕೇದಾರನಾಥಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.