News Karnataka Kannada
Friday, May 03 2024
ಉತ್ತರಖಂಡ

ಸಂಜೆ ಮದುವೆಯಾಗಿ ಮರುದಿನ ಬೆಳಗ್ಗೆ ಪತ್ನಿಗೆ ವಿಚ್ಛೇದನ

ಮಧ್ಯಪ್ರದೇಶ
Photo Credit :

ರುದ್ರಾಪುರ (ಉತ್ತರಾಖಂಡ): ತ್ರಿವಳಿ ತಲಾಖ್​ ನಿಷೇಧ ಕಾನೂನು ಜಾರಿಯಾಗಿ ಎರಡು ವರ್ಷಗಳೇ ಕಳೆದಿವೆ, 2019ರಲ್ಲಿ ಈ ಕಾನೂನು ಜಾರಿಗೆ ಬಂದರೂ ತ್ರಿವಳಿ ತಲಾಖ್‌ ನೀಡುವವರ ಸಂಖ್ಯೆಯೇನೂ ಕಮ್ಮಿಯಾಗಿಲ್ಲ. ಆದರೆ ಇದರ ಅನ್ವಯ ಮೂರು ವರ್ಷಗಳ ಕಠಿಣ ಶಿಕ್ಷೆ ಎಷ್ಟು ಮಂದಿಗೆ ಸಿ‌ಕ್ಕಿದೆ ಎನ್ನುವ ಸರಿಯಾದ ಅಂಕಿ ಅಂಶ ಇಲ್ಲ.

ಈಗ ಅಂಥದ್ದೇ ಒಂದು ಘಟನೆ ಉತ್ತರಾಖಂಡದ ರುದ್ರಾಪುರದಲ್ಲಿ ನಡೆದಿದೆ. ಸಂಜೆ ಮದುವೆಯಾದ ಜಾವೇದ್‌ ಖಾನ್​ ಎಂಬಾತ ವ್ಯಕ್ತಿಯೊಬ್ಬ ಮದುವೆಯಾದ 12 ಗಂಟೆಯಲ್ಲಿಯೇ ಅಂದರೆ ಮರುದಿನ ಬೆಳಗ್ಗೆ ಪತ್ನಿ ನಿಮ್ರಾಳಿಗೆ ತಲಾಖ್‌ ನೀಡಿದ್ದಾನೆ. ಇದಕ್ಕೆ ಕಾರಣ ವರದಕ್ಷಿಣೆ. ತಾನು ಕೇಳಿದಷ್ಟು ವರದಕ್ಷಿಣೆ ನೀಡಲಿಲ್ಲ ಎನ್ನುವ ಕಾರಣಕ್ಕೆ ಪತಿ ಹಾಗೂ ಆತನ ಕುಟುಂಬಸ್ಥರು ಸೇರಿ ಮಹಿಳೆಗೆ ದೌರ್ಜನ್ಯ ಎಸಗಿದ್ದೂ ಅಲ್ಲದೇ ತ್ರಿವಳಿ ತಲಾಖ್‌ ಕೂಡ ನೀಡಿದ್ದಾರೆ.

ಈ ಘಟನೆ ಕಳೆದ ವಾರವೇ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಕೀಚ್‌ ದರವು ನಿವಾಸಿ ನಿಮ್ರಾ ಹಾಗೂ ಬಿಲಾಸ್ಪುರದ ಚಾವೇದ್‌ ಖಾನ್ ಮದುವೆ ನವೆಂಬರ್ 28ರಂದು ನಡೆದಿದೆ. 29ರ ಬೆಳಗ್ಗೆಯಿಂದಲೇ ಜಾವೇದ್‌ ಮತ್ತು ಆತನ ಕುಟುಂಬಸ್ಥರು ಹಿಂಸೆ ನೀಡಲು ಶುರುವಾಡಿದ್ದಾರೆ. ನಿಮ್ರಾಳನ್ನು ನೆಲದ ಮೇಲೆ ಕೂರಿಸಿ ವರದಕ್ಷಿಣೆ ವಿಷಯ ಪ್ರಸ್ತಾಪಿಸಿ ಅವಮಾನಿಸಿದ್ದಾರೆ.

ಆದರೆ ಕೊಡುವುದಷ್ಟೂ ಈಗಾಗಲೇ ಕೊಟ್ಟಾಗಿದೆ. ಮತ್ತೆ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ ನಿಮ್ರಾ, ಇದರಿಂದ ಸಿಟ್ಟುಕೊಂಡು ಗಂಡನ ಮನೆಯವರು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಷಯವನ್ನು ನಿಮ್ರಾ ತನ್ನ ತಂದೆಗೆ ತಿಳಿಸಿದ್ದಾರೆ. ಗಂಡನ ಮನೆಯವರನ್ನು ಸಮಾಧಾನ ಪಡಿಸಲು ನಿಮ್ರಾಳ ಸಹೋದರರು ಗಂಡನ ಮನೆಗೆ ಹೋಗಿದ್ದಾರೆ. ಈ ವೇಳೆ ಅವರ ಎದುರೇ ಗಂಡ ತ್ರಿವಳಿ ತಲಾಖ್‌ ನೀಡಿದ್ದಾನೆ.
ನಿಮ್ರಾ ಇದೀಗ ಪತಿ ಸೇರಿದಂತೆ 8 ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಕಾನೂನಿನ ಅನ್ವಯ ಪತಿ ಹಾಗೂ ಆತನ ಕುಟುಂಬಸ್ಥರಿಗೆ ಯಾವ ರೀತಿಯ ಶಿಕ್ಷೆ ಆಗುತ್ತದೆಯೋ ನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 2 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು