ಇಂದಿನಿಂದ ಚಳಿಗಾಲ ಆರಂಭವಾಗಿದ್ದು, ಕೇದಾರನಾಥ ಮತ್ತು ಯಮುನೋತ್ರಿ ಮಹಾದ್ವಾರಗಳು ಮುಚ್ಚಲಾಗುತ್ತವೆ. ಮುಂದಿನ ಆರು ತಿಂಗಳು ಮಹಾದ್ವಾರಗಳು ತೆರೆಯಲಾಗುವುದಿಲ್ಲ. ಗಂಗೋತ್ರಿ ಬಾಗಿಲು ನಿನ್ನೆಯೇ ಬಂದ್ ಆಗಿದ್ದು, ಬದರೀನಾಥ್ ದೇವಾಲಯದ ಬಾಗಿಲು ನ.20 ರಂದು ಮುಚ್ಚಲಿದೆ.
ಗಂಗೋತ್ರಿ ದೇಗುಲದ ಪ್ರವೇಶದ್ವಾರ ನಿನ್ನೆ ಮುಚ್ಚಿರುವ ಬಗ್ಗೆ ಗಂಗೋತ್ರಿ ಮಂದಿರ ಸಮಿತಿ ಸಹ ಕಾರ್ಯದರ್ಶಿ ರಾಜೇಶ್ ಸೆಮ್ವಾಲ್ ಮಾಹಿತಿ ನೀಡಿದ್ದಾರೆ.
ಗಂಗಾ ಮಾತೆಯ ವಿಗ್ರಹವನ್ನು ಹೂವಿನಿಂದ ಅಲಂಕರಿಸಿ ಪಲ್ಲಕ್ಕಿ ಮೇಲೆ ಕೂರಿಸಿ ಮುಖ್ಭಾ ಗ್ರಾಮಕ್ಕೆ ಕರೆದೊಯ್ಯಲಾಗಿದೆ. ಅದು ದೇವಿಯ ಚಳಿಗಾಲದ ವಾಸಸ್ಥಾನವಾಗಿದೆ. ಈ ಬಾರಿ ಸೆಪ್ಟೆಂಬರ್ನಲ್ಲಿ ದೇವಿ ಮಂದಿರ ತೆಗೆದಿದ್ದು, ಗಂಗೋತ್ರಿಗೆ ಈವರೆಗೂ 32,948 ಪ್ರವಾಸಿಗರು ಭೇಟಿ ನೀಡಿದ್ದಾರೆ.
ಈ ಎಲ್ಲ ದೇವಾಲಯಗಳು ಹಿಮಾಲಯದ ಸಮೀಪ ಇರುವುದರಿಂದ ಚಳಿಗಾಲದಲ್ಲಿ ವಿಪರೀತ ಎನ್ನುವಷ್ಟು ಹಿಮಪಾತವಾಗುತ್ತದೆ. ಇದೇ ಕಾರಣಕ್ಕೆ ಬಾಗಿಲನ್ನು ಹಾಕಲಾಗುತ್ತದೆ.