News Karnataka Kannada
Friday, May 03 2024
ಉತ್ತರಖಂಡ

ಉತ್ತರಾಖಂಡ ಮಳೆ: 54 ಜನರು ಸಾವು, 5 ಮಂದಿ ನಾಪತ್ತೆ

Heavy rains disrupt normal life in Hubballi
Photo Credit :

ಡೆಹ್ರಾಡೂನ್  ಕಳೆದ ಕೆಲವು ದಿನಗಳಿಂದ ಉತ್ತರಾಖಂಡದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ 54 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ವಿವಿಧ ಘಟನೆಗಳಲ್ಲಿ ಒಟ್ಟು 19 ಜನರಿಗೆ ಗಾಯಗಳಾಗಿದ್ದು, ಐವರು ಇನ್ನೂ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಅಕ್ಟೋಬರ್ 17 ರಂದು ಚಂಪಾವತ್‌ನ ಬನ್ಬಾಸಾದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.

ಬುಧವಾರ ನೀಡಲಾದ ನವೀಕರಿಸಿದ ಪ್ರಾಕೃತಿಕ ವಿಕೋಪ ಘಟನೆ ವರದಿಯ ಪ್ರಕಾರ, ಅಕ್ಟೋಬರ್ 18 ರಂದು ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಪೈಕಿ ತಲಾ ಮೂವರು ಪೌರಿ ಮತ್ತು ಪಿಥೋರಘರ್ ಮತ್ತು ಇಬ್ಬರು ಚಂಪಾವತ್ ನಲ್ಲಿ ಸಾವನ್ನಪ್ಪಿದ್ದಾರೆ.

ಅಕ್ಟೋಬರ್ 19 ರಂದು, ಉತ್ತರಾಖಂಡ್ 45 ಸಾವುಗಳನ್ನು ದಾಖಲಿಸಿದೆ.ಈ ಪೈಕಿ ಅತಿ ಹೆಚ್ಚು ಸಾವುಗಳು (28) ನೈನಿತಾಲ್, ಆರು ಅಲ್ಮೋರಾ, 8 ಚಂಪಾವತ್, ಎರಡು ಉದಮ್ ಸಿಂಗ್ ನಗರದಲ್ಲಿ ಮತ್ತು ಒಂದು ಬಾಗೇಶ್ವರದಲ್ಲಿ ವರದಿಯಾಗಿದೆ.

ಉತ್ತರಾಖಂಡದಲ್ಲಿ ನಿರಂತರ ಮಳೆಯಿಂದಾಗಿ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.ವರದಿಯ ಪ್ರಕಾರ 46 ಮನೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ಹಾನಿಗೊಳಗಾಗಿವೆ.ಏತನ್ಮಧ್ಯೆ, ಕೇಂದ್ರ ಸಚಿವ ಅಮಿತ್ ಶಾ ಗುರುವಾರ ಉತ್ತರಾಖಂಡದ ಡೆಹ್ರಾಡೂನ್ ತಲುಪಿದ್ದು ಪರಿಸ್ಥಿತಿಯನ್ನು ಅವಲೋಕಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು