ರಾಯ್ ಬರೇಲಿ, ಮೇ 19: ಬೇಸಿಗೆ ರಜೆಯನ್ನು ಕಳೆಯಲು ಲಕ್ನೋದಿಂದ ರಾಯ್ ಬರೇಲಿಯಲ್ಲಿರುವ ಅಜ್ಜಿಯ ಮನೆಗೆ ತೆರಳಿದ್ದ 10 ವರ್ಷದ ಬಾಲಕನನ್ನು ನೆರೆಹೊರೆಯ ವ್ಯಕ್ತಿಯೊಬ್ಬರು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ರಾಯ್ ಬರೇಲಿ ಪೊಲೀಸರು ಓರ್ವನನ್ನು ಬಂಧಿಸಿದ್ದು, ಆಯುಷ್ ತಿವಾರಿ ಎಂದು ಗುರುತಿಸಲಾಗಿದೆ. ಅಪಹರಣದ ಬಳಿಕ ಬಾಲಕ ಅಳಲು, ಕೂಗಲು ಆರಂಭಿಸಿದಾಗ ಆತನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ರಾಯ್ ಬರೇಲಿ ಎಎಸ್ಪಿ ನವೀನ್ ಕುಮಾರ್ ಸಿಂಗ್ ಮಾತನಾಡಿ, ಲಾಲ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಬೇಶಿ ಗ್ರಾಮದ ತನ್ನ ಅಜ್ಜಿ ಮನೆಗೆ ಬಂದಿದ್ದ ಬಾಲಕ ಆಯುಷ್ ಬುಧವಾರದಿಂದ ಕಾಣೆಯಾಗಿದ್ದ. ಬಾಲಕನ ಸೋದರಮಾವ ಚೋಟು ಮಿಶ್ರಾ ಬುಧವಾರ ಸಂಜೆ 7.30 ರ ಸುಮಾರಿಗೆ ಆಯುಷ್ ಕಾಣೆಯಾದ ಬಗ್ಗೆ ಲಾಲ್ಗಂಜ್ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಮಾಹಿತಿ ನೀಡಿದ್ದಾರೆ.